ಕೇರಳ: ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಶಾನ್ ಹತ್ಯೆಗೆ ಪ್ರತಿಕಾರ: ಬಿಜೆಪಿ ಕಾರ್ಯದರ್ಶಿ ರಂಜಿತ್ ಶ್ರೀನಿವಾಸ್ ಮನೆಗೆ ನುಗ್ಗಿ ಭೀಕರ ಹತ್ಯೆ.
ಆಲಪ್ಪುಝ: ನಿನ್ನೆ ಎಸ್.ಡಿ.ಪಿ.ಐ ಕೇರಳ ರಾಜ್ಯ ಕಾರ್ಯದರ್ಶಿ ಕೆ.ಎಸ್ ಶಾನ್ ನಡುರಸ್ತೆಯಲ್ಲೇ ಅಪಘಾತವೆಸಗಿ ಕೊಲೆಗೈದ ಪ್ರತಿಕಾರ ಎಂಬಂತೆ ಬಿಜೆಪಿ ಕಾರ್ಯದರ್ಶಿಯ ಮನೆಗೆ ನುಗ್ಗಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಭವಿಸಿದೆ.
ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿಯ ಹತ್ಯೆಯಾಗಿ 12 ಗಂಟೆಯೊಳಗೆ ಬಿಜೆಪಿ ರಾಜ್ಯ ಕಾರ್ಯದರ್ಶಿಯ ಮನೆಯೊಳಗೆ ನುಗ್ಗಿ ಕಡಿದು ಹತ್ಯೆ ಮಾಡಲಾಗಿದೆ.
ಕೇರಳ ಎಸ್ ಡಿ ಪಿ ಐ ನಾಯಕನ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದು ಡಿಕ್ಕಿ ಹೊಡೆದು ಬಳಿಕ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದರ ರಿವೇಂಜ್ ಗಾಗಿ ಬಿಜೆಪಿ ಮುಖಂಡನನ್ನು ಹತ್ಯೆ ಮಾಡಲಾಗಿದೆ.




