February 4, 2026

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೇಘ ಸ್ಪೋಟ – ಅಂಗಡಿಗಳಿಗೆ ನುಗ್ಗಿದ ನೀರು…!!

0
image_editor_output_image-705142004-1729480004730

ಸುಬ್ರಹ್ಮಣ್ಯ:  ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮೇಘಸ್ಪೋಟ ರೀತಿಯಲ್ಲಿ ಮಳೆಯಾಗಿದ್ದು, ಕೇವಲ ಅರ್ಧ ತಾಸು ಸುರಿದ ಮಳೆಗೆ ಧರ್ಪಣ ತೀರ್ಥ ನದಿ ತುಂಬಿ ಹರಿದಿದ್ದು, ಆದಿ ಸುಬ್ರಹ್ಮಣ್ಯ ದ ಕೆಲ ಅಂಗಡಿಗೆ ನೀರು ನುಗ್ಗಿದೆ.

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಧ್ಯಾಹ್ನ ಗುಡುಗು ಮಿಂಚು ಸಹಿತ ಭಾರಿ ಮಳೆ ಸುರಿಯಿತು. ಕೇವಲ ಅರ್ಧ ತಾಸು ಸುರಿದ ಮಳೆಗೆ ಸುಬ್ರಹ್ಮಣ್ಯದ ದರ್ಪಣ ತೀರ್ಥ ನದಿ ತುಂಬಿ ಹರಿದಿದ್ದು, ಆದಿಸುಬ್ರಹ್ಮಣ್ಯ ದೇವಸ್ಥಾನದ ಹೊರಾಂಗಣ ಪ್ರವೇಶಿಸಿತು, ಅಲ್ಲದೆ ಪರಿಸರದ ಅಂಗಡಿಗಳಿಗೂ ಮಳೆ ನೀರು ನುಗ್ಗಿದೆ. ಜೊತೆಗೆ ಸುತ್ತಮುತ್ತಲಿನ ತೋಟಕ್ಕೂ ನೀರು ನುಗ್ಗಿ ಹಾನಿ ಉಂಟಾಗಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಮಳೆಗೆ ಕುಮಾರಧಾರಾ ನದಿಯಲ್ಲಿ ನೀರಿನಮಟ್ಟ ಏರಿಕೆಯಾಗಿಲ್ಲ. ದರ್ಪಣ ತೀರ್ಥದಲ್ಲಿ ಮಾತ್ರ ದಿಢೀರ್​ ನೀರು ಏರಿತು.

Leave a Reply

Your email address will not be published. Required fields are marked *

error: Content is protected !!