December 22, 2025

ಜಿಲ್ಲಾ ಬಿಜೆಪಿ ಮುಖಂಡನಿಗೆ ಹಲ್ಲೆ: ನಗದು ದೋಚಿ ಪರಾರಿ

0
image_editor_output_image-1359107932-1728626935980.jpg

ಗದಗ : ರಾಜ್ಯ ದ್ರಾಕ್ಷಾರಸ ಮಂಡಳಿಯ ಮಾಜಿ ಅಧ್ಯಕ್ಷ, ಜಿಲ್ಲಾ ಬಿಜೆಪಿ ಮುಖಂಡ ಕಾಂತೀಲಾಲ್ ಬನ್ಸಾಲಿ ಮೇಲೆ ದುಷ್ಕರ್ಮಿಗಳಿಬ್ಬರು ಹಾಡಹಗಲೇ ಹಲ್ಲೆ ನಡೆಸಿ 45 ಸಾವಿರ ರೂ. ದೋಚಿ ಪರಾರಿಯಾದ ಘಟನೆ ನಗರದಲ್ಲಿ ಗುರುವಾರ ಸಂಜೆ ನಡೆದಿದೆ.

ದುಷ್ಕರ್ಮಿಗಳ ಹಲ್ಲೆಯಿಂದ ಕಾಂತೀಲಾಲ್ ಬನ್ಸಾಲಿ ಅವರ ಎದೆ, ಮುಖ, ಬೆನ್ನು ಹಾಗೂ ತಲೆಗೆ ತೀವ್ರ ಗಾಯಗಳಾಗಿವೆ. ಮುಖಕ್ಕೆ ದುಷ್ಕರ್ಮಿಗಳು ಜೋರಾಗಿ ಗುದ್ದಿದ್ದರಿಂದ ಮುಖ ಬಾತಿದೆ. ದುಷ್ಕರ್ಮಿಗಳು ಕಾಂತೀಲಾಲ ಬನ್ಸಾಲಿ ಜೇಬಿನಲ್ಲಿದ್ದ ಸುಮಾರು 45 ಸಾವಿರ ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!