September 19, 2024

ವಿಟ್ಲ: ಬಿಸಿನೆಸ್ ನಲ್ಲಿ ಲಾಭ ನೀಡುತ್ತೇನೆಂದು ನಂಬಿಸಿ ಯುವಕನಿಗೆ ಲಕ್ಷಾಂತರ ರೂ. ವಂಚನೆ:  ಮುಡಿಪು ಮೂಲದ ವ್ಯಕ್ತಿ ವಿರುದ್ಧ ಪೊಲೀಸ್ ದೂರು

0

ವಿಟ್ಲ: ಬಿಸಿನೆಸ್ ನಲ್ಲಿ ಲಾಭ ನೀಡುತ್ತೇನೆ ಎಂದು ಅಮಾಯಕ ಯುವಕನನ್ನು ನಂಬಿಸಿ ಆತನಿಂತ ಲಕ್ಷಾಂತರ ರೂ. ಪಡೆದು ಇದೀಗ ಅಸಾಮಿ ಪರಾರಿಯಾಗಿದ್ದಾನೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಸಾಲೆತ್ತೂರು ನಿವಾಸಿ ಆಸೀಫ್ ಎಂಬಾತನಿಗೆ ಈ ಹಿಂದೆ ವಿದೇಶದಲ್ಲಿದ್ದ ವೇಳೆ ಸಿದ್ದೀಕ್ ವಿದ್ಯಾನಗರ ಮುಡಿಪು ಎಂಬಾತನ ಪರಿಚಯವಾಗುತ್ತದೆ. ಬಳಿಕ ಆತನ ಜತೆ ಆತ್ಮೀಯತೆಯಿಂದ ಒಡನಾಟ ಇಟ್ಟುಕೊಂಡಿರುತ್ತಾನೆ. ಬಳಿಕ ಆಸೀಫ್ ಊರಿಗೆ ಬಂದಿದ್ದು, ತದ ಬಳಿಕ ಅಸಾಮಿ ಸಿದ್ದೀಕ್ ವಿದ್ಯಾ ನಗರ ಕೂಡ ಊರಿಗೆ ಬಂದು, ಆಸೀಪ್ ನನ್ನು ಸಂಪರ್ಕ ಮಾಡಿರುತ್ತಾನೆ. ಆಸೀಪ್ ನಲ್ಲಿ ಬಿಸಿನೆಸ್ ಮಾಡುವ ಎಂದು ಹೇಳಿ ವಿವಿಧ ದಿನಗಳಲ್ಲಿ ಒಟ್ಟು 2.50 ಲಕ್ಷ ರೂ. ವರೆಗೆ ಹಣ ಪಡೆದಿರುತ್ತಾನೆ.

ನಿನ್ನಿಂದ ಪಡೆದ ಹಣವನ್ನು ಬಿಸಿನೆಸ್ ಗೆ ಹಾಕಿದ್ದು, ನಿನಗೆ ತಿಂಗಳು ತಿಂಗಳು ಲಾಭ ನೀಡುತ್ತೇನೆ ಎಂದು ನಂಬಿಸಿದ್ದು, ದಿನಕಳೆದಂತೆ ಲಾಭ ಇರಲಿ, ಕೊಟ್ಟ ಹಣವನ್ನು ಕೇಳಿದಾಗ ಒಂದೊಂದು ಆರೈಕೆ ಮಾತು ಹೇಳಿ ತಪ್ಪಿಸಿಕೊಂಡಿದ್ದಾನೆ. ಇದೀಗ ಸಿದ್ದೀಕ್ ನಾಪತ್ತೆಯಾಗಿದ್ದು ಅಸೀಪ್ ನ ಕರೆ ಮತ್ತು ಮೆಸೇಜ್ ಬಾರದಂತೆ ನಂಬ್ರ ಬ್ಲಾಕ್ ಮಾಡಿರುತ್ತಾನೆ. ಇದೀಗ ಆಸಾಮಿ ಊರಿಂದ ಭೂಗತನಾಗಿರುತ್ತಾನೆ ಎಂದು ಆಸೀಫ್ ವಿಟ್ಲ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.


ಈತ ಊರಿನಲ್ಲಿ ಇದೇ ರೀತಿಯಾಗಿ ಹಲವು ಮಂದಿಗೆ ಪಂಗನಾಮ ಹಾಕಿರುವ ಬಗ್ಗೆ ಜನರ ಮಾತನಾಡುತ್ತಿದ್ದಾರೆ. ಆಸೀಫ್ ಮೂಡಬಿದ್ರಿಯಲ್ಲಿ ವ್ಯಾಪಾರ ಮಾಡುತ್ತಿದ್ದು, ಕಷ್ಟಪಟ್ಟು ದುಡಿದ ಹಣವನ್ನೆಲ್ಲ ಖತರ್ನಾಕ್ ಸಿದ್ದೀಕ್ ಕೊಟ್ಟಿದ್ದು, ಕಷ್ಟದಲ್ಲಿ ದಿನ ದೂಡುತ್ತಿದ್ದಾನೆ.

Leave a Reply

Your email address will not be published. Required fields are marked *

error: Content is protected !!