ದುಬೈ ಗಡಿನಾಡ ಉತ್ಸವದ ಲಾಂಛನ ಬಿಡುಗಡೆ
ಮಂಜೇಶ್ವರ:2024 ಅಕ್ಟೋಬರ್ 13ರಂದು ದುಬೈ ಊದ್ ಮೇತದಲ್ಲಿರುವ ದುಬೈ ಜೆಮ್ ಶಾಲಾ ಸಭಾಂಗಣದಲ್ಲಿ ನಡೆಯುವ ದುಬೈ ಗಡಿನಾಡ ಉತ್ಸವದ ಲಾಂಛನವನ್ನು ಕರ್ನಾಟಕ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಬಿಡುಗಡೆ ಗೊಳಿಸಿದರು ಸಮಾರಂಭದಲ್ಲಿ ಸಂಸದ ಎಂ ಕೆ ರಾಘವನ್, ಶಾಸಕ ಎ ಕೆ ಎಂ ಅಶ್ರಫ್, ದುಬೈ ಗಡಿನಾಡ ಉತ್ಸವದ ಸಂಚಾಲಕ ಝಡ್ ಎ ಕಯ್ಯಾರ್ ಮುಂತಾದವರು ಉಪಸ್ಥಿತರಿದ್ದರು


