February 4, 2026

ಪುತ್ತೂರು: ಆಟೋ ಚಾಲಕ ಮಹಮ್ಮದ್ ಕೆರೆ ಹಾರಿ ಆತ್ಮಹತ್ಯೆ

0
image_editor_output_image267147776-1722937862931

ಪುತ್ತೂರು: ಆಟೋ ಚಾಲಕರೋರ್ವರು ಸಂಪ್ಯದ ಕೆರೆಗೆ ಹಾರಿ ಆತ್ಮಹತ್ಯೆಗೈದ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ

ಸಂಪ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಆಟೋ ಚಾಲಕ ಮಹಮ್ಮದ್ (48 ವ.) ಆತ್ಮಹತ್ಯೆಗೈದವರು.

ಮೂಲತಃ ಪುರುಷರಕಟ್ಟೆಯ ಪಾಪೆತ್ತಡ್ಕ ನಿವಾಸಿಯಾಗಿರುವ ಇವರು ಕಳೆದ ಕೆಲ ಸಮಯಗಳಿಂದ ಸಂಪ್ಯದಲ್ಲಿ ವಾಸ್ತವ್ಯ ಹೊಂದಿದ್ದರು.

ಇವರು ಪಾಪೆತ್ತಡ್ಕ ದಿ. ಅಬೂಬಕ್ಕರ್ ಅವರ ಪುತ್ರ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ಮೃತರು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!