December 19, 2025

ಎಲ್ಲಾ ವೃತ್ತಿ ರಂಗಗಳಲ್ಲಿ ವಿದ್ಯಾರ್ಥಿಗಳು ಕಾರ್ಯ ನಿರ್ವಹಿಸಲು ರಾಷ್ಟ್ರೀಯ ಸೇವಾಯೋಜನೆ ಸಹಕಾರಿ: ಡಾ. ನಾಗರತ್ನ ಕೆ. ಎ

0
IMG-20211211-WA0045.jpg

ಮಂಗಳೂರು: ಪದುವ ಕಾಲೇಜಿನಲ್ಲಿ ರಾ.ಸೆ.ಯೋ ಘಟಕ ಹಾಗೂ ಉದ್ಘಾಟನಾ ಸಮಾರಂಭ ಗುರುವಾರ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಮುಖ್ಯ ಅತಿಥಿಯಾಗಿ ಮಂಗಳೂರು ವಿಶ್ವವಿದ್ಯಾನಿಲಯದ ರಾಷ್ಟ್ರೀಯ ಸೇವಾಯೋಜನೆಯ ಸಂಯೋಜನಾಧಿಕಾರಿ ಡಾ.ನಾಗರತ್ನ ಕೆಎ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಮಾಜದಲ್ಲಿ ಹೇಗೆ ಬದುಕ ಬೇಕು ಅನ್ನುವುದನ್ನು ರಾ ಸೆ. ಯೋ ತಿಳಿಸುಕೊಡುತ್ತದೆ. ನಿಮ್ಮ ನಿಮ್ಮ ಮನೆಗಳಲ್ಲಿ ಸಸಿ ನೆಡುವ ಕಾರ್ಯ ಮಾಡಿ. ಅದು ಕೂಡ ನೀವು ಸಮಾಜಕ್ಕೆ ಕೊಡುವ ಕೊಡುಗೆಯಾಗಿದೆ. ನಿಮ್ಮ ಪರಿಸರ ಸ್ವಚ್ಛಗೊಳಿಸಿ, ಅದೇ ಸೇವೆ ಎಂದು ಅವರ ಹೇಳಿದರು.

ನಂತರ ರಾ.ಸೆ.ಯೋ ಪ್ರತಿಜ್ಞಾ ವಿಧಿ ಬೋಧಿಸಿದರು. ಇನೋರ್ವ ಅತಿಥಿ ಆಂಕರ್ ವಿಜೆ. ಡಿಕ್ಷನ್ ಮಾತನಾಡಿ. ರಾ. ಸೆ.ಯೋ ಒಂದು ಅದ್ಬುತ ವೇದಿಕೆ ಇದನ್ನು ಕಾಲೇಜು ದಿನಗಳಲ್ಲಿ ಉತ್ತಮವಾಗಿ ಬಳಸಿಕೊಳ್ಳಿ. ಕಾಲೇಜು ಜೀವನವನ್ನು ಮನೋರಂಜಿಸುವ ಜತೆಗೆ ಜವಾಬ್ದಾರಿಯುತವಾಗಿ ಪರಿಗಣಿಸಿ. ಜೀವನದಲ್ಲಿ. ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಿ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೋ.ರಂಜನ್ ವಿ. ಎನ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೋವಿಡ್ ವಾರ್ ರೂಮ್ ನಲ್ಲಿ ಕಾರ್ಯನಿರ್ವಹಿಸಿದ ಸ್ವಯಂ ಸೇವಕರನ್ನು ಅಭಿನಂದಿಸಲಾಯಿತು. ರಾ.ಸೆ.ಯೋ ಯೋಜನಾಧಿಕಾರಿ, ಪ್ರೋ. ರೋಷನ್ ಸಾಂತುಮೆರ್, ರಾಹುಲ್ ಮತ್ತು ರೇಷ್ಮಾ ಉಪಸ್ಥಿತರಿದ್ದರು. ಸ್ವಯಂ ಸೇವಕರಾದ ತನುಶ್ರೀ ನಿರೂಪಿಸಿ ಮತ್ತು ಬ್ಲಾನಿ ಡಿಸೋಜ ವಂದಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!