ಬಸ್ಗೆ ಟ್ರಕ್ ಢಿಕ್ಕಿ: ಒಂದೇ ಕುಟುಂಬದ 7 ಮಂದಿ ದಾರುಣ ಸಾವು
ಹರಿಯಾಣ: ದೇವರ ದರ್ಶನಕ್ಕೆ ಹೊರಟಿದ್ದ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ.
ವೈಷ್ಣೊದೇವಿಯ ದರ್ಶನ ಪಡೆಯಲೆಂದು ಕುಟುಂಬದವರು ಮಿನಿ ಬಸ್ ನಲ್ಲಿ ತೆರಳುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ 7 ಜನರು ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಈ ದುರ್ಘಟನೆ ಹರಿಯಾಣ ಅಂಬಾಲಾ ಬಳಿಯ ದೆಹಲಿ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತಪಟ್ಟವರು ಒಂದೇ ಕುಂಟುಬಂದವರಾಗಿದ್ದಾರೆ. ದೇವಿಯ ದರ್ಶನಕ್ಕೆಂದು ಹೋಗುತ್ತಿದ್ದ ಮಿನಿ ಬಸ್ ಗೆ ಟ್ರಕ್ ಡಿಕ್ಕಿ ಹೊಡೆದಿದ್ದು ಈ ಭೀಕರ ಅಪಘಾತದಲ್ಲಿ ಕುಟುಂಬದ ಏಳು ಮಂದಿ ಅಸುನೀಗಿದ್ದಾರೆ.
25ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.




