September 20, 2024

50 ಸಾವಿರ ರೂ. ಲಂಚದ ಬೇಡಿಕೆ: ಮಡಿಕೇರಿ ಸಬ್ ರಿಜಿಸ್ಟರ್ ಸೌಮ್ಯ ಲತಾ ಅಮಾನತು

0

ಮಡಿಕೇರಿ: ಖಾತೆ ಬದಲಾವಣೆಗೆ ಲಂಚದ ಬೇಡಿಕೆ ಇಟ್ಟಿದ್ದ ಮಡಿಕೇರಿಯ ಸಬ್ ರಿಜಿಸ್ಟರ್ ಇದೀಗ ಅಮಾನತುಕೊಂಡಿದ್ದಾರೆ.

ಮಾರ್ಚ್ 20ರಂದು ಎನ್ ಎಸ್ ಕುಮಾರ್ ಎಂಬುವವರ ದಾಖಲಾತಿಯನ್ನು ಸರಿಪಡಿಸಲು ಮಡಿಕೇರಿಯ ಸಬ್ ರಿಜಿಸ್ಟರ್ ಸೌಮ್ಯಲತಾ ರವರು 50,000 ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದು ಮಧ್ಯವರ್ತಿ ಹರಿದಾಸ್ ಮೂಲಕ ಈ ಹಣವನ್ನು ಪಡೆದಿದ್ದು ಲೋಕಾಯುಕ್ತರು ದಾಳಿ ನಡೆಸಿ ಹರಿದಾಸ್ ಅವರನ್ನು ಬಂಧಿಸಿದ್ದರು.

ಇದೀಗ ಮುದ್ರಾಂಕ ಅಧಿಕ್ಷಕರಾದ ಬಿ ಆರ್ ಮಮತಾ ರವರು ಸೌಮ್ಯಲತಾ ರವರನ್ನು ಅಮಾನಿತನಲಿಟ್ಟು ಆದೇಶ ಹೊರಡಿಸಿದ್ದಾರೆ.

ಪ್ರಕರಣದ ತನಿಖೆ ಮುಗಿಯುವವರೆಗೆ ಸಬ್ ರಿಜಿಸ್ಟರ್ ಸೌಮ್ಯ ಲತಾ ಕೇಂದ್ರ ಸ್ಥಾನ ಬಿಟ್ಟು ಬೇರೆ ಕಡೆ ಹೋಗುವಂತಿಲ್ಲ ಎಂಬುದನ್ನು ಕೂಡ ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!