December 19, 2025

ಬಸ್‌ನಡಿಗೆ ಬಿದ್ದ ಬೈಕ್: ಬಿಕಾಂ ವಿದ್ಯಾರ್ಥಿ ಸಾವು

0
image_editor_output_image-283200402-1710460567965.jpg

ಕೊಟ್ಟಾಯಂ: ಕಾರಿಗೆ ಡಿಕ್ಕಿ ಹೊಡೆದ ನಂತರ ನಿಯಂತ್ರಣ ತಪ್ಪಿದ ಬೈಕ್‌ನಿಂದ ವಿದ್ಯಾರ್ಥಿಯೊಬ್ಬ ಬಸ್‌ನಡಿ ಬಿದ್ದು ಸಾವನ್ನಪ್ಪಿದ್ದಾರೆ.

ಚಿತ್ತಾರ ಮನ್ನಪರಂನಲ್ಲಿ ಅಮಲ್ ಶಾಜಿ(18) ದಾರುಣವಾಗಿ ಸಾವನ್ನಪ್ಪಿದ್ದಾರೆ. ಪಾಲಾ ಸೈಂಟ್ ಥಾಮಸ್‌ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ.

ಏಟುಮನೂರು-ಪೂಂಜಾರ್ ರಾಜ್ಯ ಹೆದ್ದಾರಿಯ ಪುಲಿಯನ್ನೂರು ಜಂಕ್ಷನ್‌ನಲ್ಲಿ ಗುರುವಾರ ಬೆಳಗ್ಗೆ ಒಂಬತ್ತು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದೆ.

ಪುಲಿಯನ್ನೂರಿನಿಂದ ಹಿಂತಿರುಗುತ್ತಿದ್ದ ಅಮಲ್ ಕಾರನ್ನು ಓವ‌ರ್ ಟೇಕ್ ಮಾಡುವ ಭರದಲ್ಲಿ ಡಿಕ್ಕಿ ಹೊಡೆದಿದ್ದಾರೆ. ಆಗ ನಿಯಂತ್ರಣ ತಪ್ಪಿ ಬೈಕ್ ಪಲ್ಟಿಯಾಗಿ ಅಮಲ್ ಎದುರಿನಿಂದ ಬರುತ್ತಿದ್ದ ಟೂರಿಸ್ಟ್ ಬಸ್ಸಿನ ಕೆಳಗೆ ಬಿದ್ದಿದ್ದಾರೆ.

ಬಸ್ಸಿನ ಹಿಂಬದಿಯ ಚಕ್ರಗಳು ಆತನ ತಲೆಯ ಮೇಲೆ ಹರಿದು ಸಾವನ್ನಪ್ಪಿದ್ದಾರೆ. ಮೃತದೇಹವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಬಿಡುಗಡೆ ಮಾಡಲಾಗುವುದು. ಅಮಲ್ ಶಾಜಿ ಶಾಜಿ ಮತ್ತು ಗ್ರೇಸ್ ಅವರ ಮಗ. ಸಹೋದರಿ ಎಲಿಜಬೆತ್.

Leave a Reply

Your email address will not be published. Required fields are marked *

You may have missed

error: Content is protected !!