September 19, 2024

ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಅದಿ ದಾರುನ್ನಜಾತ್ ಎಜುಕೇಶನಲ್ ಸೆಂಟರ್ ಟಿಪ್ಪು ನಗರ ವಿದ್ಯಾ ಸಂಸ್ಥೆಗೆ ಭೇಟಿ

0

ವಿಟ್ಲ: ದಾರುನಜಾತ್ ಸಂಸ್ಥೆಗೆ ಕರ್ನಾಟಕ ಸರ್ಕಾರದ ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರಾದ ಶಾಫಿ ಸಹದಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಪದಾಧಿಕಾರಿಗಳು ಬರಮಾಡಿಕೊಂಡು ಅವರನ್ನು ಸಂಸ್ಥೆಯ ವತಿಯಿಂದ ಮೆನೇಜರ್ ಹಾಜಿ ಹಮೀದ್ ಕೊಡಂಗಾಯಿ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಫಿ ಸಅದಿ ವಕ್ಫ್ ಬೋರ್ಡ್ ಅನುದಾನವನ್ನು ಪಡೆದುಕೊಂಡು ಮಸೀದಿ ಮದರಸಗಳ ಸಬಲೀಕರಣಗೊಳಿಸಲು ಕೈಜೋಡಿಸಬೇಕು ಎಂದು ಕರೆ ನೀಡಿದರು.

ರಾಜ್ಯ ವಕ್ಫ್ ಬೋರ್ಡ್ ಸದಸ್ಯರಾದ ಯಾಕೂಬ್ ಸಂಸ್ಥೆಯ ಕೋಶಾಧಿಕಾರಿ ಡಾ ಹಸೈನಾರ್ ಸದಸ್ಯರುಗಳಾದ ಹಸೈನಾರ್ ಮುಸ್ಲಿಯಾರ್, ಉಮ್ಮರ್ ವಿಟ್ಲ, ಅಬ್ಬಾಸ್ ಟಿಪ್ಪು ನಗರ ,ಅಶ್ರಫ್ ಟಿಪ್ಪು ನಗರ, ಅಬ್ದುರಹ್ಮಾನ್ ಟಿಪ್ಪು ನಗರ, ಖಾದರ್ ಫೈಝಿ, ಅಬೂಬಕ್ಕರ್ ಉಕ್ಕುಡ, ಇಬ್ರಾಹಿಂ ಮುಸ್ಲಿಯಾರ್ ಟಿಪ್ಪು ನಗರ, ಮುದರ್ರಿಸ್ ಹಮೀದ್ ಲತೀಫಿ, ಅಬ್ದುಲ್ ರಝಾಕ್ ಸಅದಿ ಕೊಡಿಪ್ಪಾಡಿ, ‌ಹಾಫಿಳ್ ಶೇರಿಫ್ ಮುಸ್ಲಿಯಾರ್, SMA ವಿಟ್ಲ ರಿಜಿನಲ್ ಅಧ್ಯಕ್ಷರಾದ ಹಕೀಮ್ ಶಾಂತಿನಗರ, ಕಾಸಿಂ ಸಖಾಫಿ, ಶೇರೀಫ್ ಉಕ್ಕುಡ,‌ ಮುಸ್ತಫಾ ಕುಂಡಡ್ಕ, ಖಾದರ್ ಕಲೀಫ, SMA ಪ್ರ ಕಾರ್ಯದರ್ಶಿ ಸ್ವಾದಿಕ್ ಸಖಾಫಿ, ಇಸ್ಮಾಯಿಲ್ ಮಾಸ್ಟರ್, ಜಿಲ್ಲಾ ವಕ್ಫ್ ಅಧಿಕಾರಿ ಅಬೂಬಕ್ಕರ್, ಅಶಿಫ್ ಟಿಪ್ಪು ನಗರ, ಹಾರಿಸ್ ಒಕ್ಕೆತ್ತೂರು, ಮಜೀದ್ ಸಖಾಫಿ, ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ SMA ವಿಟ್ಲ ರೀಜಿನಲ್ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಮಹೋಂ ಅಬೂಬಕ್ಕರ್ ಮುಸ್ಲಿಯಾರ್ ಮಕ್ಬರ ಝಿಯಾರತ್ ಮಾಡಿ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.

Leave a Reply

Your email address will not be published. Required fields are marked *

error: Content is protected !!