ಪುರುಷೋತ್ತಮನ ಪ್ರಸಂಗ ಸಿನಿಮಾಗೆ ಉತ್ತಮ ರೆಸ್ಪಾನ್ಸ್
ಯುವಸಮೂಹ ತಕ್ಷಣ ಹಣ ಗಳಿಸಬೇಕು, ನೆನೆಸಿದ್ದನ್ನೆಲ್ಲಾ ಈಡೇರಿಸಬೇಕೆಂಬ ದಾವಂತದಲ್ಲಿರುವುದು ಪ್ರಸ್ತುತ ಕಾಲಘಟ್ಟದ ಸನ್ನಿವೇಶ. ಅದಕ್ಕಾಗಿ ನಾನಾ ಕನಸು ಕಾಣುತ್ತಾರೆ. ಏನೆಲ್ಲಾ ಸರ್ಕಸ್ ಮಾಡುತ್ತಾರೆ. ಇಲ್ಲೊಬ್ಬ “ಪುರುಷ” ತಾನು ದುಬೈಗೆ ಹೋಗಬೇಕು, ಕುಟುಂಬ ಸಲಹಬೇಕು, ಅಕ್ಕನ ಮದುವೆ ಮಾಡಿ ತಾನೂ ಮದುವೆಯಾಗಿ ಸುಖವಾಗಿರಬೇಕು ಎಂಬ ದೃಢ ನಿಲುವಿನೊಂದಿಗೆ ದುಬೈಗೆ ಹೋಗುತ್ತಾನೆ. ಇದು “ಪುರುಷೋತ್ತಮನ ಪ್ರಸಂಗ” ಚಿತ್ರದ ಥೀಮ್.
ಈ ಚಿತ್ರ ನೋಡಿದ ಪ್ರೇಕ್ಷಕರು ತುಂಬ ಖುಷಿಪಟ್ಟಿದ್ದಾರೆ. ಸರ್ವಧರ್ಮದ ಜನ ಈ ಸಿನಿಮಾದ ಬಗ್ಗೆ ಫುಲ್ ಖುಷಿಯಾಗಿದ್ದಾರೆ.
ಪುರುಷೋತ್ತಮನ ಪ್ರಸಂಗ ಸಿನಿಮಾ ಉತ್ತಮ ರೀತಿಯಲ್ಲಿ ಮುಡಿಬಎಂದಿದ್ದು, ಈ ಸಿನಿಮಾದಲ್ಲಿ ಎಲ್ಲರೂ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಕುಟುಂಬ ಸಮೇತ ಬಂದು ನೋಡಬಹುದಾದ ಸಿನಿಮಾ ಇದಾಗಿದೆ. ಇದರಲ್ಲಿ ಕಾಪಿಕಾಡ್ ಅವರ ಅಭಿನಯ ಬಹಳ ಚಂದವಾಗಿ ಮೂಡಿಬಂದಿವೆ. ಒಳ್ಳೆಯ ಸಂದೇಶ ಇರುವ ಸಿನಿಮಾ ಇದಾಗಿದೆ. ಈ ಸಿನಿಮಾದಲ್ಲಿ ಅಭಿನಯಕ್ಕಿಂತಲು ಸಹಜತೆ ಎದ್ದು ಕಾಣಿಸುತ್ತದೇ. ಈ ರೀತಿಯಾಗಿ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.




