ಪಣಂಬೂರು: ಸಮುದ್ರಪಾಲಾದ ಇಬ್ಬರ ಮೃತದೇಹ ಪತ್ತೆ
ಪಣಂಬೂರು: ಪಣಂಬೂರು ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ಸಮುದ್ರಪಾಲಾದ ಮೂವರಲ್ಲಿ ನಾಗರಾಜ್ (24) ಮತ್ತು ಮಿಲನ್ (20) ಅವರ ಮೃತದೇಹ ಸೋಮವಾರ ಬೆಳಗ್ಗೆ ಮುಳುಗಡೆಯಾದ ಸ್ಥಳದ ಅನತಿ ದೂರದಲ್ಲಿ ಪತ್ತೆಯಾಯಿತು. ಲಿಖಿತ್ (18)ಗಾಗಿ ಹುಡುಕಾಟ ಮುಂದುವರಿದಿದೆ.
ಬೀಚ್ ಪ್ರಕ್ಷುಬ್ಧತೆ ಮುಂದುವರಿದಿದ್ದು ವಾಟರ್ ನ್ಪೋರ್ಟ್ಸ್ ಅನ್ನು ಬೀಚ್ ಟೂರಿಸಂ ಸಂಸ್ಥೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಸೋಮವಾರ ಬೆಳಗ್ಗಿನಿಂದ ಬರುವ ಪ್ರವಾಸಿಗರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗುತ್ತಿತ್ತು. ದೂರದಿಂದ ಬೀಚ್ ನೋಡಲು ಬಂದವರು ನಿರಾಸೆಗೊಳಗಾದರೆ ಇನ್ನು ಕೆಲವರು ರಕ್ಷಣೆ ತಂಡದ ಕಣ್ಣು ತಪ್ಪಿಸಿ ನೀರಾಟಕ್ಕೆ ಇಳಿಯುವ ಯತ್ನ ನಡೆಸುತ್ತಿದ್ದುದು ಕಂಡುಬಂತು.
ಸ್ಥಳಕ್ಕೆ ತಹಶೀಲ್ದಾರ್, ಪಣಂಬೂರು ಪೊಲೀಸರು ಭೇಟಿ ನೀಡಿ ನಾಪತ್ತೆಯಾದವರ ಪತ್ತೆಗೆ ಕ್ರಮ ಕೈಗೊಂಡರು.




