ವಿಟ್ಲ: ಕೇಂದ್ರ ಜುಮ್ಮಾ ಮಸೀದಿ ಮೇಗಿನಪೇಟೆ ಜಮಾಅತ್ ಯೂತ್ ವಿಂಗ್ಸ್ ಮಹಾಸಭೆ
ವಿಟ್ಲ; ವಿಟ್ಲ ಕೇಂದ್ರ ಜುಮಾ ಮಸೀದಿ ಅಧೀನದ ವಿಟ್ಲ ಜಮಾಅತ್ ಯೂತ್ ವಿಂಗ್ಸ್ ನ ಮಹಾಸಭೆಯು ಮಸೀದಿ ಅಧ್ಯಕ್ಷ ಇಕ್ಬಾಲ್ ಶೀತಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಖತೀಬ್ ಮಹಮ್ಮದ್ ಸಸೀಹ್ ದಾರಿಮಿ ದುವಾ ನೆರವೇರಿಸಿದರು.
ಈ ಸಂದರ್ಭ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು.
ಗೌರವಾಧ್ಯಕ್ಷರಾಗಿ ಇಬ್ರಾಹಿಂ ಹಳೆಮನೆ,
ಅಧ್ಯಕ್ಷರಾಗಿ ರಫೀಕ್ ಪೊನ್ನೋಟು, ಉಪಾಧ್ಯಕ್ಷರಾಗಿ ಸೈಝಾದ್ ಹಳೆಮನೆ, ಪ್ರಧಾನ ಕಾರ್ಯದರ್ಶಿಯಾಗಿ ನಮೀರ್ ಹಳೆಮನೆ, ಜತೆ ಕಾರ್ಯದರ್ಶಿಯಾಗಿ ಶಿಹಾಬ್ ಏರ್ ಸೌಂಡ್ಸ್ ಮತ್ತು ಅಶ್ರಫ್ ಅಲಿ,ಕೋಶಾಧಿಕಾರಿಯಾಗಿ ಆಸಿಫ್ ಮೇಗಿನಪೇಟೆ, ಸಂಘಟನಾ ಕಾರ್ಯದರ್ಶಿಯಾಗಿ ತಮೀಮ್, ಗೌರವ ಸಲಹೆಗಾರರಾಗಿ ನೋಟರಿ ಅಬೂಬಕರ್ ಹಾಗೂ ಅಬೂಬಕರ್ ಅನಿಲಕಟ್ಟೆ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಹೊರೈಝನ್ ಪಬ್ಲಿಕ್ ಸ್ಕೂಲ್ ನ ಕಾರ್ಯದರ್ಶಿ ನೋಟರಿ ಅಬೂಬಕರ್,ಮಸೀದಿ ಮಾಜಿ ಅಧ್ಯಕ್ಷರಾದ. ಇಬ್ರಾಹಿಂ ಹಳೆಮನೆ, ವಿ.ಎ.ರಶೀದ್,ಕಾರ್ಯದರ್ಶಿ ಹಮೀದ್ ಬದ್ರಿಯಾ, ಜತೆ ಕಾರ್ಯದರ್ಶಿ ಹಮೀದ್ ಕುರುಂಬಳ,ಕೋಶಾಧಿಕಾರಿ ಶರೀಫ್ ಪೊನ್ನೋಟು, ಹಮೀದ್ ಪೊನ್ನೋಟು ,ಮಹಮ್ಮದ್ ಅಲಿ ಮುಂತಾದವರು ಉಪಸ್ಥಿತರಿದ್ದರು.
ಲೇಖಕ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.




