9 ವರ್ಷದ ಮಗುವನ್ನು ನೀರಿನಲ್ಲಿ ಮುಳುಗಿಸಿ ಕೊಂದ 13 ವರ್ಷದ ಬಾಲಕನ ಬಂಧನ
ತಮಿಳುನಾಡು: ವಿರುದುನಗರದಲ್ಲಿ 9 ವರ್ಷದ ಬಾಲಕನನ್ನು ಕೊಲೆ ಮಾಡಿದ ಆರೋಪದ ಮೇಲೆ 13 ವರ್ಷದ ಬಾಲಕನನ್ನು ಬಂಧಿಸಲಾಗಿದೆ. ಮೃತಪಟ್ಟ ಬಾಲಕನನ್ನು ಅಜಯ್ ಎಂದು ಗುರುತಿಸಲಾಗಿದ್ದು, ಆರೋಪಿ ನೀರಿನಲ್ಲಿ ಮುಳುಗಿಸಿದ್ದಾನೆ ಎಂದು ವರದಿಯಾಗಿದೆ.
ಆಟದ ವೇಳೆ ಇಬ್ಬರು ಜಗಳವಾಡಿದ್ದು, ಕಿರಿಯ ಬಾಲಕ ಆರೋಪಿಯ ತಂದೆಗೆ ದೂರು ನೀಡಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ 13 ವರ್ಷದ ಬಾಲಕ, ಅಜಯ್ಗೆ ಈಜು ಕಲಿಸುವ ನೆಪದಲ್ಲಿ ಕೊಳಕ್ಕೆ ಕರೆದೊಯ್ದು ನೀರಿನಲ್ಲಿ ಮುಳುಗಿಸಿದ್ದಾನೆ.
ಬಾಲಕ ಮನೆಗೆ ಹಿಂದಿರುಗದ ಹಿನ್ನೆಲೆಯಲ್ಲಿ ಅಜಯ್ನ ಕುಟುಂಬವು ನಾಪತ್ತೆಯಾಗಿರುವ ದೂರು ದಾಖಲಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
ತನಿಖೆಯ ಸಮಯದಲ್ಲಿ, ಪೊಲೀಸರು ಪ್ರದೇಶದ ಸಿಸಿಟಿವಿ ದೃಶ್ಯಗಳನ್ನು ಸ್ಕ್ಯಾನ್ ಮಾಡಿದರು ಮತ್ತು 13 ವರ್ಷದ ಬಾಲಕ ಮತ್ತು ಮೃತಪಟ್ಟ ಬಾಲಕನೊಂದಿಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಪೋಲೀಸರ ವಿಚಾರಣೆಯ ನಂತರ, ಜಗಳದ ಬಗ್ಗೆ ತನ್ನ ತಂದೆಗೆ ದೂರು ನೀಡಿದ್ದರಿಂದ 13 ವರ್ಷದ ಬಾಲಕ, ಅಜಯ್ನನ್ನು ನೀರಿನಲ್ಲಿ ಮುಳುಗಿಸಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.




