December 19, 2025

ಪುತ್ತೂರು: ನೀರಿಗೆ ಇಳಿದಿದ್ದ ವೇಳೆ ಹೃದಯಾಘಾತ:
ಬೊಳುವಾರಿನ ಮೆಕ್ಯಾನಿಕ್ ಯುವಕ ಮೃತ್ಯು

0
dead-6.jpg

ಪುತ್ತೂರು: ನೀರಿಗಿಳಿದಿದ್ದ ವೇಳೆ ಹೃದಯಾಘಾತ ಸಂಭವಿಸಿ ಯುವಕನೋರ್ವ ಮೃತಪಟ್ಟ ಘಟನೆ ಇರ್ದೆ ಬೇಂದ್ರ್ ತೀರ್ಥ ಬಳಿ ನಡೆದಿದೆ.

ದೇವಸ್ಯ ನಿವಾಸಿ ಸುಜಿತ್ (27) ಮೃತ ಯುವಕ.

ಸುಜಿತ್ ರವರು ಇರ್ದೆ ಬೇಂದ್ರ್ ತೀರ್ಥ ಬಳಿ ಇರುವ ಸಂಬಂಧಿಕರ ಮನೆಗೆ ತೆರಳಿದ್ದು, ಈ ವೇಳೆ ನೀರಿಗಿಳಿದಿದ್ದು, ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆನ್ನಲಾಗಿದೆ.

ಸುಜಿತ್ ಬೊಳುವಾರಿನ ಗ್ಯಾರೇಜ್ ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಮನೆಯವರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!