ಉಪ್ಪಳ: ಮನೆ ಅಂಗಳದಲ್ಲೇ ಕಾರಿನಡಿಗೆ ಸಿಲುಕಿ ಮಗು ಮೃತ್ಯು
ಕಾಸರಗೋಡು: ಮನೆ ಅಂಗಳದಲ್ಲೇ ಕಾರಿನಡಿಗೆ ಸಿಲುಕಿ ಒಂದೂವರೆ ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಉಪ್ಪಳ ಸಮೀಪದ ಸೋಂಕಾಲ್ ನಲ್ಲಿ ನಡೆದಿದೆ.
ಸೋಂಕಾಲ್ ಕೊಡಂಗೆಯ ನಿಸಾರ್ ಅವರ ಪುತ್ರ ಮಸ್ತುಲ್ ಜಿಶಾನ್ ಮೃತ ಪಟ್ಟ ಬಾಲಕ.
ಜಿಶಾನ್ ನ ಚಿಕಪ್ಪ ಕಾರು ಮುಂದಕ್ಕೆ ತೆಗೆಯುತ್ತಿದ್ದಾಗ ಅಲ್ಲೇ ನಿಂತಿದ್ದ ಬಾಲಕನಿಗೆ ಡಿಕ್ಕಿ ಹೊಡೆದಿದ್ದು, ಕಾರಿನಡಿಗೆ ಸಿಲುಕಿದ್ದ ಬಾಲಕನನ್ನು ಆಸ್ಪತ್ರೆಗೆ ತಲಪಿಸದರೂ ಜೀವ ಉಳಿಸಲಾಗಳಿಲ್ಲ.
ಇನ್ನು ಬೊಬ್ಬೆ ಕೇಳಿ ಪರಿಸರ ವಾಸಿಗಳು, ಸಂಬಂಧಿಕರು ಮಗುವನ್ನು ಹೊರತೆಗೆದು ಮಂಗಳೂರು ಆಸ್ಪತ್ರೆಗೆ ತಲಪಿಸಿದರೂ ಜೀವ ಉಳಿಸಲಗಲಿಲ್ಲ.
ಮಂಜೇಶ್ವರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.





