ಸಾಲಗಾರರ ಕಾಟ: ಪತ್ನಿಯನ್ನು ಕೊಂದು ಆತ್ಮಹತ್ಯೆಕೊಂಡ ಪತಿ
ಬಳ್ಳಾರಿ: ಸಾಲದ ಕಾಟಕ್ಕೆ ಬೇಸತ್ತು, ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿಯ ಬಂಡಿಹಟ್ಟಿಯಲ್ಲಿ ನಡೆದಿದೆ.
ನಗರದ ಆಂಜನೇಯ ದೇವಸ್ಥಾನ ಬಳಿ ನಿವಾಸಿಗಳಾದ ಈರಣ್ಣ (28) ತನ್ನ ಪತ್ನಿ ದುರ್ಗಮ್ಮಳನ್ನ (25) ನೇಣು ಹಾಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈರಣ್ಣನ ಈ ಕೆಟ್ಟ ನಿರ್ಧಾರದಿಂದ ರಾಕೇಶ್ ಎಂಬ 16 ತಿಂಗಳ ಮಗು ಅನಾಥವಾಗಿದೆ




