ವಿಟ್ಲ: ಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘ ವಿಭಜನೆ ಆದೇಶಕ್ಕೆ ಹೈ ಕೋರ್ಟ್ ನಿಂದ ತಡೆಯಾಜ್ಞೆ
ವಿಟ್ಲ: ಕೇಂದ್ರ ಸರಕಾರದ ನೂತನ ಸಹಕಾರಿ ನಿಯಮದಂತೆ ಗ್ರಾಮಕ್ಕೊಂದು ಸೊಸೈಟಿ ಮಾಡಬೇಕೆಂದು ರಾಜ್ಯ ಸರಕಾರ ಸಹಕಾರಿ ನಿಬಂಧಕರ ಮೂಲಕ ವಿಟ್ಲಪಡ್ನೂರು ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಮಾಡಲಾದ ಆದೇಶವನ್ನು ಆಡಳಿತ ಮಂಡಳಿ ಸಭೆ ಸೇರಿ ನಿರ್ಣಯಿಸಿದಂತೆ ಹೈ ಕೋರ್ಟ್ ನಲ್ಲಿ ಪ್ರಶ್ನಿಸಿ ದಾವೆ ಹೂಡಿರುವುದನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಲಯ, ವಿಟ್ಲಪಡ್ನೂರು, ಕೊಳ್ನಾಡು, ಸಾಲೆತ್ತೂರು ಗ್ರಾಮಗಳಲ್ಲಿ ಪ್ರತ್ಯೇಕ ಸೊಸೈಟಿಗಳಾದಲ್ಲಿ ಆಗುವ ತೊಂದರೆಗಳ ಬಗ್ಗೆ ವಾದವನ್ನು ಆಲಿಸಿ, ಮುಂದಿನ ಆದೇಶದ ವರೆಗೆ ತಡೆಯಾಜ್ಞೆ ನೀಡಿ ಆದೇಶ ನೀಡಿದೆ ಎಂದು ಸಂಘದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ತಿಳಿಸಿದ್ದಾರೆ.
ಸಂಘದ ಪರವಾಗಿ ನ್ಯಾಯವಾದಿ ಕೇಶವ ಭಟ್ ಆಗರ್ತ ಮತ್ತು ಕೃಷ್ಣ ಕೆ ವಾದಿಸಿದ್ದರು.




