ಕುಣಿಗಲ್ :ಜಮೀನಿನ ತೋಟದಲ್ಲಿ ಕಳೆ ಕೀಳುತ್ತಿದ್ದ ವೇಳೆ ಬಾಲಕಿಗೆ ಹುಟ್ಟು ಹಬ್ಬದ ದಿನದಂದೇ ಹಾವು ಕಚ್ಚಿ ಸಾವನಪ್ಪಿರುವ ಘಟನೆ ತಾಲೂಕಿನ ಸಂತೆಮಾವತ್ತೂರು ಸಮೀಪದ ಪಂಚವಟಿ ತಾಂಡ್ಯದಲ್ಲಿ ಶನಿವಾರ ನಡೆದಿದೆ.
ಗ್ರಾಮದ ಶಂಕರ್ ನಾಯ್ಕ್ ಹಾಗೂ ಸವಿತಾ ಭಾಯಿ ಅವರ ಪುತ್ರಿ ಚೈತನ್ಯಭಾಯಿ(9) ಹುಟ್ಟು ಹಬ್ಬದ ದಿನದಂದೇ ಸಾವನಪ್ಪಿರುವ ನತದೃಷ್ಟ ಬಾಲಕಿ.