December 16, 2025

ಕಾಸರಗೋಡು: ಕಾರು ಅಪಘಾತದಿಂದ ವ್ಯಕ್ತಿ ಸಾವು

0
image_editor_output_image-1109603065-1691253543918.jpg

ಕಾಸರಗೋಡು: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಪೆರ್ಲದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಶೇಣಿ ಮಣಿಯಂಪಾರೆ ಮಣ್ಣಂಗಳದ ಜಾನು ನಾಯ್ಕ್ ರವರ ಪುತ್ರ ಎನ್. ಜೆ. ರೋಷನ್ (29) ಮೃತಪಟ್ಟವರು.

ಗುರುವಾರ ರಾತ್ರಿ ಪೆರ್ಲ ಸಮೀಪದ ಅಡ್ಕಸ್ಥಳದಲ್ಲಿ ಅಪಘಾತ ನಡೆದಿತ್ತು. ನಿಯಂತ್ರಣ ತಪ್ಪಿದ ಕಾರು ಮಗುಚಿ ಬಿದ್ದು, ರೋಷನ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ.

ಬದಿಯಡ್ಕ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ವರ್ಷಗಳ ಹಿಂದೆ ಉಡುಪಿಯಲ್ಲಿ ನಡೆದ ಅಪಘಾತದಲ್ಲಿ ರೋಷನ್ ನ ಸಹೋದರಿ ರಾಜೇಶ್ವರಿ ಮೃತಪಟ್ಟಿದ್ದರು.

Leave a Reply

Your email address will not be published. Required fields are marked *

error: Content is protected !!