ತುಂಬೆಯಲ್ಲಿ ಕಾರು ಅಪಘಾತ: ಪುತ್ತೂರಿನ ಕೂರ್ನಡ್ಕದ ವಿಧ್ಯಾರ್ಥಿನಿ ಮೃತ್ಯು
ಬಂಟ್ವಾಳ: ತುಂಬೆಯಲ್ಲಿ ನಡೆದ ಕಾರು ಅಪಘಾತದಲ್ಲಿ ಪುತ್ತೂರಿನ ಕೂರ್ನಡ್ಕದ ಬಿಬಿಎಂ ವಿಧ್ಯಾರ್ಥಿನಿಯೊಬ್ಬರು ಮೃತಪಟ್ಟಿರುವುದಾಗಿ ವರದಿಯಾಗಿದೆ.
ಪುತ್ತೂರು ಕೂರ್ನಡ್ಕ ಫೀರ್ ಮೊಹಲ್ಲಾ ಜಮಾಅತ್ ಗೆ ಒಳಪಟ್ಟ ಕೂರ್ನಡ್ಕ ನಿವಾಸಿ, ಅಬ್ದುಲ್ ಮಜೀದ್ ರವರ ಮಗಳು ಬಿಬಿಎಂ. ವಿಧ್ಯಾರ್ಥಿನಿ ಹನಃ (19) ಮೃತರು ಎಂದು ತಿಳಿದುಬಂದಿದೆ.
ಮೃತರು ಕೂರ್ನಡ್ಕದ ಗಣೇಶ್ ಬೀಡಿ ಕಾಂಟ್ರಾಕ್ಟರ್ ಆಗಿರುವ ಸೀದಿಕುಂಞ ಹಾಜಿಯವರ ಮೊಮ್ಮಗಳು ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.




