ಕೈಕಂಬ ಆಟೋ ಯೂನಿಯನ್: ಅಧ್ಯಕ್ಷರಾಗಿ ಆದಂ ಪಳ್ಳ, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಕೆ.ಎಚ್. ಆಯ್ಕೆ
ಬಂಟ್ವಾಳ: ಕೈಕಂಬ ಆಟೋ ಯೂನಿಯನ್ ವಾರ್ಷಿಕ ಮಹಾಸಭೆ, ಆಟೋ ಚಾಲಕರ ಸಂಘ ಇದರ ವಾರ್ಷಿಕ ಮಹಾಸಭೆಯು ಅಡ್ಡೆಡಿಯಲ್ಲಿ ಇಸ್ಮಾಯಿಲ್ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಬಶೀರ್ ಹೊಳೆಬದಿ, ನೂತನ ಅಧ್ಯಕ್ಷರಾಗಿ ಆದಂ ಪಳ್ಳ, ಉಪಾಧ್ಯಕ್ಷರಾಗಿ ಖಾದರ್ ತಾಳಿಪಡ್ಪು ಹಾಗೂ ನಿಯಾಜ್ ತಾಳಿಪಡ್ಪು, ಪ್ರಧಾನ ಕಾರ್ಯದರ್ಶಿಯಾಗಿ ಅನ್ವರ್ ಕೆ. ಎಚ್, ಜೊತೆ ಕಾರ್ಯದರ್ಶಿಯಾಗಿ ಅಬ್ಬಿ ಬದ್ರಿಯಾ ಮತ್ತು ಸಲಾಂ ನಂದರಬೆಟ್ಟು, ಖಜಾಂಚಿಯಾಗಿ ಮೊಹಮ್ಮದ್ಆಲಿ ಶಾಂತಿ ಅಂಗಡಿ ಮತ್ತು ಇತರ ಹದಿನಾಲ್ಕು ಮಂದಿಯನ್ನು ಕಾರ್ಯಕಾರಿ ಸಮಿತಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು.
ಅನ್ವರ್ ಕೆ ಚ್ ತಲಪಾಡಿ ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿಯವರ ಗೈ ರು ಹಾಜರಿಯಲ್ಲಿ ಅಧ್ಯಕ್ಷರು ಲೆಕ್ಕ ಪತ್ರ ಮಂಡಿಸಿದರು. ಎಲ್ಲಾ ಸದಸ್ಯರ ಒಪ್ಪಿಗೆಯೊಂದಿಗೆ ಎಲ್ಲವನ್ನು ಪರಿಶೀಲಿಸಿ ಹಳೆಯ ಸಮಿತಿಯನ್ನು ಬರ್ಕಾಸ್ತು ಗೊಳಿಸಿ 2023ರ ನೂತನ ಸಮಿತಿಯನ್ನು ರಚಿಸಲಾಯಿತು.
ಕೆಲವು ನಿರ್ಣಯ ಗಳೊಂದಿಗೆ ಸಭೆಯನ್ನು ಸರ್ವನುಮತದಿಂದ ಮುಕ್ತಾಯಗೊಳಿಸಲಾಯಿತು