September 20, 2024

ಮಂಗಳೂರು: ಉತ್ತರ ಕ್ಷೇತ್ರದಲ್ಲಿ ಇನಾಯತ್ ಅಲಿಗೆ ಬಹುತೇಕ ಟಿಕೆಟ್ ಫಿಕ್ಸ್: ಕೊನೇ ಕ್ಷಣದಲ್ಲಿ ಮೊಯ್ದಿನ್ ಬಾವಾಗೆ ‘ಕೈ’ ಕೊಟ್ಟ ಕಾಂಗ್ರೆಸ್?

0

ಮಂಗಳೂರು: ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ಆಯ್ಕೆ ಹೈಕಮಾಂಡ್ ಗೆ ಕಗ್ಗಂಟಾಗಿದ್ದು ಐದನೇ ಪಟ್ಟಿಯಲ್ಲೂ ಅಭ್ಯರ್ಥಿಯ ಹೆಸರು ಘೋಷಣೆಯಾಗಿಲ್ಲ. ಕ್ಷೇತ್ರ ವ್ಯಾಪ್ತಿಯಲ್ಲಿ ಸಕ್ರೀಯ ರಾಜಕಾರಣ ನಡೆಸುತ್ತಿರುವ ಮೊಯ್ದಿನ್ ಬಾವಾ ಕೊನೇ ತನಕವೂ ನಿರೀಕ್ಷೆಯಲ್ಲಿದ್ದಾರೆ.

ಒಂದೊಮ್ಮೆ ಅವರಿಗೆ ಪಕ್ಷ ಮಣೆ ಹಾಕುತ್ತೆ ಎಂದಿದ್ದರೆ, ಆರಂಬದಲ್ಲೇ ಅವರ ಹೆಸರು ಘೋಷಣೆಯಾಗುತ್ತಿತ್ತು. ಆದರೆ, ಇನಾಯತ್ ಅಲಿ ಹೆಸರು ಹೈಕಮಾಂಡ್ ಹೆಚ್ಚು ನೆಚ್ಚಿಕೊಂಡಿರುವ ಕಾರಣದಿಂದಾಗಿ ಹೆಸರು ಘೋಷಣೆ ಮಾಡುವುದೇ ತಲೆನೋವಾಗಿದೆ.

ಈ ನಡುವೆ ಆಂತರಿಕವಾಗಿ ಇನಾಯತ್ ಅಲಿಗೆ ಪಕ್ಷ ಟಿಕೆಟ್ ನೀಡುವುದು ಬಹುತೇಕ ಖಚಿತವಾದಂತಿದೆ. ಇದಕ್ಕೆ ಪೂರಕವೆಂಬಂತೆ ಪಕ್ಷದೊಳಗಿಂದಲೇ ಇನಾಯತ್ ಅಲಿ ಪರ ಪೋಸ್ಟರ್ ಗಳನ್ನು ಪ್ರಕಟಿಸಲಾಗಿದೆ. ಮತ್ತೊಂದೆಡೆ ನಾಳೆ ನಾಮಪತ್ರ ಸಲ್ಲಿಕೆಗೆ ಕೊನೇ ದಿನ. ಅದೇ ದಿನ ನೇರವಾಗಿ ನಾಮಪತ್ರ ಸಲ್ಲಿಸುವಂತೆ ಇನಾಯತ್ ಅಲಿಗೆ ಹೈಕಮಾಂಡ್ ಬುಲಾವು ನೀಡಿದೆ ಎನ್ನಲಾಗಿದೆ.

ಈ ನಡುವೆ ಬಾವಾ ಅಭಿಮಾನಿಗಳು ಸಭೆ ನಡೆಸಿ ಚರ್ಚೆ ನಡೆಸಿದ್ದು ಮೊಯ್ದಿನ್ ಬಾವಾ ಅವರಿಗೆ ಉತ್ತರ ಕ್ಷೇತ್ರದಲ್ಲಿ ಟಿಕೆಟ್ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ, ಮುಂದಿನ ಬೆಳವಣಿಗೆ ಮಾತ್ರ ಕುತೂಹಲ ಕೆರಳಿಸಿದೆ.

Leave a Reply

Your email address will not be published. Required fields are marked *

error: Content is protected !!