December 20, 2025

ಕೇರಳ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಪ್ರಿಯಕರನ ಮುಖಕ್ಕೆ ಆಸಿಡ್ ಎರಚಿದ ಮಹಿಳೆ

0
WhatsApp_Image_2021-11-21_at_0_0_1200x768.jpeg

ಇಡುಕ್ಕಿ: ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ತನ್ನ ಪ್ರಿಯಕರನ ಮೇಲೆ ಆಸಿಡ್ ಎಸೆದ ಆರೋಪದ ಮೇಲೆ ವರ್ಷದ ಮಹಿಳೆಯನ್ನು ಬಂಧಿಸಲಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಅಡಿಮಾಲಿ ಎಂಬಲ್ಲಿ ಈ ಘಟನೆ ನಡೆದಿದೆ.

ಸಂತ್ರಸ್ತ ಅರುಣ್ ಕುಮಾರ್ (27) ತಿರುವನಂತಪುರಂ ಜಿಲ್ಲೆಯ ಪೂಜಾಪ್ಪುರ ಮೂಲದವರು. ಆರೋಪಿ ಶೀಬಾಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿದ್ದ ಆತ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಅರುಣ್ ಬೇರೊಬ್ಬ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದು, ಶೀಬಾಳ ಮನಸ್ತಾಪಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 16 ರಂದು ಅಡಿಮಾಲಿ ಸಮೀಪದ ಇರುಂಪುಪಾಲಂನಲ್ಲಿರುವ ಸೇಂಟ್ ಆಂಟೋನಿ ಚರ್ಚ್ ಬಳಿ ಶೀಬಾ ಅರುಣ್ ಕುಮಾರ್ ಅವರಿಗೆ ಕರೆ ಮಾಡಿದ್ದಳು. ಅರುಣ್ ಸ್ವಲ್ಪ ದೂರ ಹೋಗುವ ಮೊದಲು ಇಬ್ಬರು ಮಾತನಾಡುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ. ಶೀಬಾ ಅವರತ್ತ ನಡೆದುಕೊಂಡು ಹೋಗಿ ಆ್ಯಸಿಡ್ ದಾಳಿ ನಡೆಸುತ್ತಿರುವುದು ವಿಡಿಯೋದಲ್ಲಿದೆ.

ದಾಳಿಯಲ್ಲಿ ಅರುಣ್ ಕುಮಾರ್ ಅವರ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಶೀಬಾ ಅವರ ಮುಖ ಮತ್ತು ಕೈಗೂ ಗಂಭೀರ ಗಾಯಗಳಾಗಿವೆ. ಅರುಣ್ ಕುಮಾರ್ ಅವರು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಶುಕ್ರವಾರ ಅಡಿಮಾಲಿ ಪೊಲೀಸರು ಶೀಬಾಳನ್ನು ವಶಕ್ಕೆ ಪಡೆದಿದ್ದಾರೆ.

Leave a Reply

Your email address will not be published. Required fields are marked *

You may have missed

error: Content is protected !!