ಕಾಸರಗೋಡು: ತಮಿಳುನಾಡು ಮೂಲದ ಕಾರ್ಮಿಕನ ನಿಗೂಢ ಸಾವು ಪ್ರಕರಣ: ಮೂರು ಆರೋಪಿಗಳ ಬಂಧನ
ಕಾಸರಗೋಡು: ಮೂರು ದಿನಗಳ ಹಿಂದೆ ನೀಲೇಶ್ವರ ಕೋಟಪ್ಪುರದಲ್ಲಿ ತಮಿಳುನಾಡು ಮೂಲದ ಕಾರ್ಮಿಕನ ನಿಗೂಢ ಸಾವು ಪ್ರಕರಣ ಕೊಲೆ ಎಂದು ಸಾಬೀತಾಗಿದ್ದು, ಕೃತ್ಯಕ್ಕೆ ಸಂಬಂಧಪಟ್ಟಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಎರ್ನಾಕುಲಂ ಕಲಕಂಚೇರಿಯ ಕೆ .ಪಿ ಬೈಜು (43), ಕಲಮಶ್ಯೇರಿಯ ಮುಹಮ್ಮದ್ ಫೈಝಲ್ (42) ನೋರ್ತ್ ಪರವೂರಿನ ಡೇನಿಯಲ್ ಬೆನ್ನಿ (43) ಬಂಧಿತರು.
ತಮಳುನಾಡು ಮಧುರೆ ಯ ರಮೇಶ್ (43) ಎಂಬವರ ಕೊಲೆಗೆ ಸಂಬಂಧಪಟ್ಟಂತೆ ಆರೋಪಿಗಳನ್ನು ಬಂಧಿಸಲಾಗಿದೆ.
ಮಾರ್ಚ್ 4ರಂದು ರಮೇಶ್ ವಾಸ ಸ್ಥಳದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಸ್ಥಳೀಯರು ನೀಡಿದ ಮಾಹಿತಿಯಂತೆ ಪೊಲೀಸರು ಸ್ಥಳಕ್ಕಾಮಿಸಿ ತನಿಖೆ ನಡೆಸಿದ್ದರು.




