February 3, 2026

ಎಸ್.ಎಸ್.ಎಫ್ ಕನ್ಯಾಡಿ ಯುನಿಟ್ ನೂತನ ಸಾರಥಿಗಳ ರಚನೆ

0
IMG-20230207-WA0000.jpg

ಧರ್ಮಸ್ಥಳ: ಎಸ್.ಎಸ್.ಎಫ್ ಕನ್ಯಾಡಿ ಯುನಿಟ್ ನೂತನ ಪದಾಧಿಕಾರಿಗಳನ್ನು ರಚಿಸಲಾಯಿತು. ಮಹಾಸಭೆಯು ಅದಿತ್ಯವಾರ ಎಂಟು ಗಂಟೆಗೆ ಸರಿಯಾಗಿ ಬದ್ರಿಯಾ ಜುಮಾ ಮಸೀದಿ ಕನ್ಯಾಡಿ ವಠಾರದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯನ್ನು ಅಸ್ಸಾರ್ ಸಅದಿ ಮಾಚಾರ್ ವಹಿಸಿ ಪ್ರಾರ್ಥನೆ ಮಾಡಿದರು. ಜನರೆಡೆಯಲ್ಲಿ ಶಾಂತಿಯನ್ನು ಬಿತ್ತಿ ಒಂದಾಗಿ ಬದುಕುವಲ್ಲಿ ಎಸ್ ಎಸ್ ಎಫ್ ವಿದ್ಯಾರ್ಥಿ ಸಂಘವು ಶ್ರಮಿಸಬೇಕು. ಎಂದು ಇಮ್ದಾದ್ ಕನ್ಯಾಡಿ ಸ್ವಾಗತ ಗೈದರು. ಯಸಸ್ವಿನತ್ತ ನಮ್ಮ ಪಯಣದ ಹಾದಿ ಸಾಗುತ್ತಿರಬೇಕು ಎಂದು ಶಾಹುಲ್ ಮುಈನಿ ಉಸ್ತಾದ್ ಉದ್ಘಾಟಿಸಿದರು. ನಂತರ ಅಧ್ಯಕ್ಷರ ನೇತೃತ್ವದಲ್ಲಿ ನೂತನ ಕಮೀಟಿ ರಚಿಸಲಾಯಿತು.

ಅಧ್ಯಕ್ಷರು: ಶಾಹುಲ್ ಮುಹೀನಿ ಉಸ್ತಾದ್
ಕಾರ್ಯದರ್ಶಿ: ಸಿರಾಜ್ ಅಜಿಕುರಿ
ಕೋಶಾಧಿಕಾರಿ: ಸಫ್ವಾನ್ ಅಜಿಕುರಿ.
ನಂತರ 8 ಸೆಕಟ್ರಿಯೇಟ್ ರಚಿಸಿ ಮುಬೀನ್ ಉಜಿರೆ ಸಲಹೆ ನೀಡಿದರು. ಸಂಘಟನೆ ಎನ್ನುವುದು ಹೆಸರಿಗಾಗಿಯು ಹಿರಿಮೆಗಾಗಿಯು ಅಲ್ಲ. ನಮ್ಮನ್ನು ಕೆಡುಕುಗಳಿಂದ ರಕ್ಷಿಸಿ ಉತ್ತಮ ದಾರಿ ತೂರುವುದಕ್ಕಾಗಿ ಎಂದು ಕಿವಿಮಾತುಗಳನ್ನು ಹೇಳಿದರು. ಇಬ್ರಾಹಿಂ ಸಖಾಫಿ ಕಡಬ ಆಶಂಶೆ ನುಡಿದು, ನಂತರ ದನ್ಯವಾದದ ಮೂಲಕ ವೇದಿಯು ಕೊನೆಗೊಂಡಿತು.

Leave a Reply

Your email address will not be published. Required fields are marked *

error: Content is protected !!