ಪಾರ್ಟಿಗಳಿಗೆ ಯಾರು ಹೋಗಬೇಕು, ಹೋಗಬಾರದು ಎಂದು ಹೇಳಲು ಇವರು ಯಾರು?: ಬಜರಂಗದಳದ ಅನೈತಿಕ ಪೊಲೀಸ್ ಗಿರಿ ವಿರುದ್ಧ ಮಜೀದ್ ಮೈಸೂರು ಕಿಡಿ
ಮಂಗಳೂರು: ನ್ಯೂ ಇಯರ್ ಪಾರ್ಟಿ ವಿರುದ್ಧ ಬಜರಂಗದಳ ಕಿಡಿ ವಿಚಾರಕ್ಕೆ ಸಂಬಂಧಿಸಿ ಬಜರಂಗದಳದವರ ಬಂಧನಕ್ಕೆ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.
ಪಾರ್ಟಿಗಳಿಗೆ ಯಾರು ಹೋಗಬೇಕು, ಯಾರು ಹೋಗಬಾರದು ಎಂದು ಹೇಳಲಿಕ್ಕೆ ಇವರ್ಯಾರು? ಬಜರಂಗದಳದ ನೈತಿಕ ಪೊಲೀಸ್ಗಿರಿ ನೋಡಿದರೆ ದ.ಕ ಜಿಲ್ಲೆಯಲ್ಲಿ ಸರ್ಕಾರ ಇಲ್ಲ, ಕಾನೂನು ಸುವ್ಯವಸ್ಥೆ ಸರಿ ಇಲ್ಲ. ಜಿಲ್ಲೆಯಲ್ಲಿ ಪೊಲೀಸ್ ಇಲ್ಲ, ಬಹಿರಂಗವಾಗಿ ಇಲಾಖೆಯ ಅಸ್ತಿತ್ವವನ್ನೇ ಪ್ರಶ್ನೆ ಮಾಡಲಾಗುತ್ತಿದೆ. ಸರ್ಕಾರದ ಅಸ್ತಿತ್ವ ಪ್ರಶ್ನೆ ಮಾಡುವುದು ಏನನ್ನ ಸೂಚಿಸುತ್ತದೆ ಎಂದು ಕಿಡಿಕಾರಿದ್ದಾರೆ




