ಮಂಜೇಶ್ವರ: ಕತಾರ್ ನಲ್ಲಿ ಕಾರು ಢಿಕ್ಕಿ, ಉಪ್ಪಳದ ನಿವಾಸಿ ಮೃತ್ಯು
ಮಂಜೇಶ್ವರ : ಕತಾರ್ ನಲ್ಲಿ ಕಾರು ಡಿಕ್ಕಿ ಹೊಡೆದ ಪರಿಣಾಮ ಉಪ್ಪಳ ನಿವಾಸಿಯೋರ್ವರು ಮೃತಪಟ್ಟ ಬಗ್ಗೆ ಮನೆಯವರಿಗೆ ಮಾಹಿತಿ ಲಭಿಸಿದೆ.
ಉಪ್ಪಳ ಪತ್ವಾಡಿ ಯ ಮುಹಮ್ಮದ್ ಹನೀಫ್ (52) ಮೃತಪಟ್ಟವರು. ರಸ್ತೆ ದಾಟುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಶನಿವಾರ ರಾತ್ರಿ ಕೆಲಸ ಮುಗಿಸಿ ಮರಳುತ್ತಿದ್ದಾಗ ಈ ಘಟನೆ ನಡೆದಿದೆ
ಗಂಭೀರ ಗಾಯಗೊಂಡ ಹನೀಫ್ ರವರನ್ನು ಆಸ್ಪತೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಹನೀಫ್ ಡಿಸೆಂಬರ್ ತಿಂಗಳಲ್ಲಿ ಕತಾರ್ ಗೆ ತೆರಳಿದ್ದು, ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದರು.




