ನೀರಿನ ಸೆಳೆತಕ್ಕೆ ಸಿಲುಕಿ ದ್ವಿಚಕ್ರವಾಹನ ಸಮೇತ ಕೊಚ್ಚಿಹೋಗಿ ಓರ್ವ ಸಾವು, ಇನ್ನೋರ್ವ ಪಾರು
ಗೌರಿಬಿದನೂರು ; ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ದ್ವಿಚಕ್ರವಾಹನದಲ್ಲಿ ಪ್ರಯಾಣಿಸುತ್ತಿದ್ದ ಯುವಕರಿಬ್ಬರು ಸೇತುವೆ ದಾಟುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ದ್ವಿಚಕ್ರವಾಹನ ಸಮೇತ ಕೊಚ್ಚಿಹೋಗಿ ಓರ್ವ ಸಾವನ್ನಪ್ಪಿದ್ದು ಇನ್ನೋರ್ವ ಪಾರಾದ ಘಟನೆ ನಡೆದಿದೆ.
ಶಿರಾ ತಾಲೂಕಿನ ಕಣವೇಗೆರೆ ಗ್ರಾಮದ ಬಸವರಾಜು (23) ಸಾವನ್ನಪ್ಪಿದ ವ್ಯಕ್ತಿಯಾಗಿದ್ದು, ಆನೂಡಿಯ ಪ್ರಶಾಂತ್ (22) ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತಾಲೂಕಿನಲ್ಲಿ ಸುರಿಯುತ್ತಿರುವ ವ್ಯಾಪಕ ಮಳೆಯಿಂದಾಗಿ ಹಲವು ಕಡೆ ಅಸ್ತಿಪಾಸ್ತಿಗಳು ನಷ್ಟಹೊಂದಿದೆ.




