ವಿಟ್ಲ: ಉರಿಮಜಲಿನಲ್ಲಿ ರಸ್ತೆಯಲ್ಲಿ ಹಸಿರು ಧ್ವಜ ಹಾಕಿದ ವಿವಾದ: ತೆರವುಗೊಳಿಸಿ, ಬೇರೆ ಕಡೆ ಅಳವಡಿಸಿದ ಮುಸಲ್ಮಾನರು
ವಿಟ್ಲ: ಉರಿಮಜಲಿನಲ್ಲಿ ಈದ್ ಮೀಲಾದ್ ಪ್ರಯುಕ್ತ ರಸ್ತೆಯಲ್ಲಿ ಗುಂಡಿ ತೆಗೆದು ಹಸಿರು ಧ್ವಜ ಹಾಕಿದ್ದು, ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಅಧಿಕಾರಿಗಳ ಮನವಿ ಮೇರೆಗೆ ಧ್ವಜವನ್ನು ತೆರವುಗೊಳಿಸಲಾಗಿದೆ.
ಡಾಮರು ರಸ್ತೆಯ ಮಧ್ಯದಲ್ಲಿ ಹಸಿರು ಧ್ವಜ ಹಾಕಿದ್ದು, ಸರ್ಕಾರದ ಅನುದಾನದಿಂದ ನಿರ್ಮಿಸಿದ ಡಾಮರು ರಸ್ತೆಯನ್ನು ಹಾನಿ ಮಾಡಿದ್ದಾರೆ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಆಕ್ರೋಶದ ವ್ಯಕ್ತಪಡಿಸಿದ್ದರು.
ಸ್ಥಳೀಯ ಅಧಿಕಾರಿಯ ಮನವಿ ಮೇರೆಗೆ ಈ ವಿವಾದವನ್ನು ಸ್ಥಳೀಯ ಮುಸಲ್ಮಾನರು ಹಸಿರು ದ್ವಜವನ್ನು ತೆರವುಗೊಳಿಸಿ, ಸೌಹಾರ್ಧವಾಗಿ ವಿವಾದಕ್ಕೆ ತೆರೆ ಎಳೆದಿದ್ದು, ಧ್ವಜವನ್ನು ಬೇರೆ ಕಡೆ ಅಳವಡಿಸಿದ್ದಾರೆ.





