ಡ್ರೈವರ್ ಇರ್ಷಾದ್ ತಲಪಾಡಿ ನಿಧನ: ವಿವಿಧ ಸಂಘಟನೆಗಳಿಂದ ಸಂತಾಪ
ಬಂಟ್ವಾಳ: ತಮಿಳುನಾಡಿನ ಅಂಬೂರ್ ಎಂಬಲ್ಲಿ ಶುಕ್ರವಾರ ತಡ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಿ.ಸಿ.ರೋಡ್ ತಲಪಾಡಿ ನಿವಾಸಿ ಡ್ರೈವರ್ ಇರ್ಷಾದ್ ಅವರಿಗೆ ವಿವಿಧ ಸಂಘಟನೆಗಳಜ ಸಂತಾಪ ಸೂಚಿಸಿದೆ.
ಬದ್ರಿಯಾ ಜುಮಾ ಮಸೀದಿ ತಲಪಾಡಿ ಇದರ ಆಡಳಿತ ಮಂಡಳಿ ಅಧ್ಯಕ್ಷ ಇದನಬ್ಬ, ಅಲ್ ರಹ್ಮಾ ಫೌಂಡೇಶನ್ ಬಿ.ಎಂ ಮುಸ್ತಾಕ್, ಪಿಎಫ್ಐ ತಲಪಾಡಿ ಘಟಕದ ಅಧ್ಯಕ್ಷ ಬಿ.ಎಂ.ಟಿ. ಅಶ್ರಫ್, ಎಸ್ಡಿಪಿಐ ತಲಪಾಡಿ ಘಟಕದ ಅಧ್ಯಕ್ಷ ಲತೀಫ್ ಬಿ.ಸಿ., ಎಸ್ಡಿಪಿಐ ಬಂಟ್ವಾಳ ಪುರಸಭಾ ಸಮಿತಿ ಸದಸ್ಯರಾದ ಶಾವುಲ್ ತಲಪಾಡಿ ಸಂತಾಪ ಸೂಚಿಸಿದ್ದಾರೆ.
ಅಲ್ಲಾಹು ಅವರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ. ಅವರ ಖಬರನ್ನು ಸ್ವರ್ಗದ ಉದ್ಯಾನವನ್ನಾಗಿ ಮಾರ್ಪಡಿಸಲಿ ಹಾಗೂ ಅವರ ಕುಟುಂಬ, ಬಂಧು-ಬಳಗದವರಿಗೆ ಸಹನಾ ಶಕ್ತಿಯನ್ನು ಕರುಣಿಸಲಿ ಎಂದು ಸಂತಾಪ ಸೂಚಿಸಿದೆ.