July 18, 2026

ವಿಟ್ಲ: ಸಾಮಾಜಿಕ ಜಾಲತಾಣಗಳಲ್ಲಿ ಶಾಸಕ ಅಶೋಕ್ ರೈ ಅವರ ನಿಂದನೆ: ವಿಟ್ಲ ಕಾಂಗ್ರೆಸ್ ನಿಂದ ಪೊಲೀಸ್ ಠಾಣೆಗೆ ದೂರು

0
image_editor_output_image-739389208-1784358240244

ವಿಟ್ಲ: ಸಾಮಾಜಿಕ ಜಾಲತಾಣಗಳಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ಧ ಅವಹೇಳನಕಾರಿ ಮತ್ತು ನಿಂದನಾತ್ಮಕ ಪೋಸ್ಟ್‌ಗಳನ್ನು ಹರಡಿರುವ ಆರೋಪದ ಮೇಲೆ ಮಹೇಶ್ ವಿಕ್ರಂ ಹೆಗಡೆ ಎಂಬುವವರ ವಿರುದ್ಧ ವಿಟ್ಲ ಪೊಲೀಸ್ ಠಾಣೆಗೆ ಅಧಿಕೃತ ದೂರು ನೀಡಲಾಗಿದೆ.


ವಿಟ್ಲ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿಟ್ಲ ಬ್ಲಾಕ್ ಸಾಮಾಜಿಕ ಜಾಲತಾಣ ಸಮಿತಿಯ ಪದಾಧಿಕಾರಿಗಳು ಜಂಟಿಯಾಗಿ ಈ ದೂರನ್ನು ದಾಖಲಿಸಿದ್ದು, ಶಾಸಕರ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


ಪ್ರಮುಖ ನಾಯಕರ ಉಪಸ್ಥಿತಿ
ದೂರು ಸಲ್ಲಿಸುವ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಭಾಗವಹಿಸಿದ ಪ್ರಮುಖರು:
ಪದ್ಮನಾಭ ಪೂಜಾರಿ ಸಣ್ಣ ಗುತ್ತು (ಅಧ್ಯಕ್ಷರು, ವಿಟ್ಲ ಬ್ಲಾಕ್ ಕಾಂಗ್ರೆಸ್)
ಎಂ. ಎಸ್. ಮಹಮ್ಮದ್ (ಪ್ರಧಾನ ಕಾರ್ಯದರ್ಶಿ, ಕೆಪಿಸಿಸಿ)
ಪ್ರವೀಣ್ ಚಂದ್ರ ಆಳ್ವ (ಕಾರ್ಯದರ್ಶಿ, ದ.ಕ. ಜಿಲ್ಲಾ ಕಾಂಗ್ರೆಸ್)
ರಮಾನಾಥ್ ವಿಟ್ಲ (ಕಾರ್ಯದರ್ಶಿ, ದ.ಕ. ಜಿಲ್ಲಾ ಕಾಂಗ್ರೆಸ್)
ಶ್ರೀನಿವಾಸ್ ಶೆಟ್ಟಿ ಕೊಲ್ಯ (ಅಧ್ಯಕ್ಷರು, ವಿಟ್ಲ ನಗರ ಕಾಂಗ್ರೆಸ್)
ದಿನಕರ ಆಳ್ವ (ಉಪಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್)
ಮಹಾಲಿಂಗ ನಾಯ್ಕ (ಅಧ್ಯಕ್ಷರು, ಬ್ಲಾಕ್ ಎಸ್.ಟಿ. ಘಟಕ)
ಮೋಹನ್ ಗುರ್ಜಿನಡ್ಕ (ಅಧ್ಯಕ್ಷರು, ಬ್ಲಾಕ್ ಹಿಂದುಳಿದ ಘಟಕ)
ವಿ. ಅಬ್ದುಲ್ ರಹಿಮಾನ್ (ಸದಸ್ಯರು, ವಿಟ್ಲ ಪಟ್ಟಣ ಪಂಚಾಯಿತಿ)
ಇಕ್ಬಾಲ್ ಹೊನೆಸ್ಟ್ (ಸದಸ್ಯರು, ವಿಟ್ಲ ಪಟ್ಟಣ ಪಂಚಾಯಿತಿ)
ರಾಮಣ್ಣ ಪಿಲಿಂಜ (ಸದಸ್ಯರು, ಅಕ್ರಮ-ಸಕ್ರಮ ಸಮಿತಿ)
ವಿ. ಕೆ. ಎಂ. ಹಂಝ (ಬ್ಲಾಕ್ ಪ್ರಧಾನ ಕಾರ್ಯದರ್ಶಿ)
ಅಬ್ಬು ನವಗ್ರಾಮ (ಗ್ಯಾರಂಟಿ ಸಮಿತಿ ಸದಸ್ಯರು)
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಶೈಕ್ ಅಲಿ ಸೆರಾಜೆ, ಚೇತನ್, ಶಂಶಿರ್ ನೆಲ್ಲಿಗುಡ್ಡೆ ಸೇರಿದಂತೆ ಹಲವು ಕಾರ್ಯಕರ್ತರು ಉಪಸ್ಥಿತರಿದ್ದು, ಕಾನೂನು ಹೋರಾಟಕ್ಕೆ ಬೆಂಬಲ ಸೂಚಿಸಿದರು.

Leave a Reply

Your email address will not be published. Required fields are marked *

You may have missed

error: Content is protected !!