ಡ್ರೈವರ್ ಇರ್ಷಾದ್ ತಲಪಾಡಿ ನಿಧನ: SDTU ಬಂಟ್ವಾಳ ತಾಲೂಕು ಸಮಿತಿ ಸಂತಾಪ
ಬಂಟ್ವಾಳ: ತಮಿಳುನಾಡಿನ ಅಂಬೂರ್ ಎಂಬಲ್ಲಿ ಶುಕ್ರವಾರ ತಡ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಿ.ಸಿ.ರೋಡ್ ತಲಪಾಡಿ ನಿವಾಸಿ ಡ್ರೈವರ್ ಇರ್ಷಾದ್ ಅವರಿಗೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಬಂಟ್ವಾಳ ತಾಲೂಕು ಸಮಿತಿಯ ಅಧ್ಯಕ್ಷ ಮುಸ್ತಾಕ್ ತಲಪಾಡಿ ಸಂತಾಪ ಸೂಚಿಸಿದ್ದಾರೆ
ಅಲ್ಲಾಹು ಅವರಿಗೆ ಮಗ್ಫಿರತ್ ಮತ್ತು ಮರ್ಹಮತ್ ನೀಡಿ ಅನುಗ್ರಹಿಸಲಿ. ಅವರ ಖಬರನ್ನು ಸ್ವರ್ಗದ ಉದ್ಯಾನವನ್ನಾಗಿ ಮಾರ್ಪಡಿಸಲಿ ಹಾಗೂ ಅವರ ಕುಟುಂಬ, ಬಂಧು-ಬಳಗದವರಿಗೆ ಸಹನಾ ಶಕ್ತಿಯನ್ನು ಕರುಣಿಸಲಿ ಎಂದು ಸಂತಾಪ ಸೂಚಿಸಿದೆ.




