ಕುಂಬಳೆಯಲ್ಲಿ ಖಾಸಗಿ ಬಸ್ ಗಳ ಮುಂದೆ ವಿದ್ಯಾಥಿ೯ಗಳ ಪ್ರತಿಭಟನೆ
ಕುಂಬಳೆ: ಇಲ್ಲಿನ ಕುಂಬಳೆ ಪೇಟೆಯಲ್ಲಿ ಖಾಸಗಿ ಬಸ್ ಗಳ ನಿವಾ೯ಹಕರು ವಿದ್ಯಾಥಿ೯ಗಳಿಂದ ನ್ಯಾಯಯುತವಾದ ದರ ವಸೂಲಿ ಮಾಡುವಂತೆ ಆಗ್ರಹಿಸಿ ಎಂ ಎಸ್ ಎಫ್ ನೇತ್ರತ್ವದಲ್ಲಿ ಬಸ್ ಗಳ ನಿವಾ೯ಹಕರಿಗೆ ಎಚ್ಚರಿಕೆಯನ್ನು ನೀಡಲಾಯಿತು.
ಕೆಲವೊಂದು ಬಸ್ ಗಳಲ್ಲಿ ಅಮಿತ ದರ ವಸೂಲಿ ಮಾಡುವುದಾಗಿ ಆರೋಪವಿದ್ದು, ಕೂಡಲೇ ತಕ್ಕ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಆರ್ ಟಿ ಓರವರಲ್ಲಿ ವಿನಂತಿಸಿಕೊಳ್ಳಲಾಯಿತು. ಕೆಲವೊಂದು ನಿಲ್ದಾಣಗಳಲ್ಲಿ ವಿದ್ಯಾಥಿ೯ಗಳನ್ನು ಹತ್ತಿಸಲು ಬಸ್ ನಿಲ್ಲಿಸುವುದಿಲ್ಲವೆಂಬ ಆರೋಪವಿದೆ.





