ರೈಲ್ವೆ ಕೆಳಸೇತುವೆಗೆ ಢಿಕ್ಕಿ ಹೊಡೆದ ಕಾರು: ಮೂವರು ಸ್ಥಳದಲ್ಲಿ ಮೃತ್ಯು, ಇನ್ನಿಬ್ಬರಿಗೆ ಗಾಯ
ಚಿಕ್ಕಬಳ್ಳಾಪುರ: ತಾಲೂಕಿನ ಜಾತಿವಾರ ಹೊಸಹಳ್ಳಿ ರೈಲ್ವೆ ಕೆಳಸೇತುವೆಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅದರಲ್ಲಿದ್ದ ಮೂವರು ಸ್ಥಳದಲ್ಲಿ ಮೃತಪಟ್ಟಿದ್ದು ಇನ್ನಿಬ್ಬರು ಗಾಯಗೊಂಡಿರುವ ಘಟನೆ ಸಂಭವಿಸಿದೆ.
ಆರ್.ಪುರದ ಅರುಣ್ (39),ಸೋಮೇನಹಳ್ಳಿಯ ವರಲಕ್ಷ್ಮಿ(25) ಎನ್. ಆರ್.ಐ ಲೇಔಟ್ನ ಶಿವಕುಮಾರ್ (29) ಮೃತಪಟ್ಟ ದುರ್ದೈವಿಗಳು.
ಇನ್ನೂ ವಾಪ್ಸಂದ್ರದ ಚಂದ್ರಶೇಖರ್(43 ) ಅರುಣ ಚಂದ್ರಶೇಖರ್ (39) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.




