March 20, 2026

ರಾಮನನ್ನು ನಂಬುವವರು ದಲಿತರ ಎಂಜಲು ಏಕೆ ತಿನ್ನುವುದಿಲ್ಲ: ಜಿತಿನ್ ರಾಮ್ ಮಾಂಝಿ

0
Screenshot_2022-04-16-04-26-01-22_680d03679600f7af0b4c700c6b270fe7.jpg

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತೊಮ್ಮೆ ಭಗವಾನ್ ರಾಮನ ಬಗ್ಗೆ ಚರ್ಚಾಸ್ಪದ ಹೇಳಿಕೆ ನೀಡಿದ್ದಾರೆ.

ಗುರುವಾರದ ಕಾರ್ಯಕ್ರಮವೊಂದರಲ್ಲಿ ಮಾಂಝಿ ಅವರು ಅಸ್ಪೃಶ್ಯತೆ ಸಮಸ್ಯೆ ಕುರಿತು ಮಾತನಾಡುತ್ತಾ, ಭಗವಾನ್ ರಾಮನ ಕುರಿತು ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ರಾಮನನ್ನು ನಂಬುವವರು ದಲಿತರ ಎಂಜಲು ಏಕೆ ತಿನ್ನುವುದಿಲ್ಲ ಎಂದು ಪ್ರಶ್ನಿಸಿದರು. ದೊಡ್ಡವರು ಅಧಿಕಾರಕ್ಕಾಗಿ ಜನರನ್ನು ಒಡೆದಿದ್ದಾರೆ ಎಂದರು.

ಬಿಜೆಪಿ-ಜೆಡಿಯು ಸರ್ಕಾರದ ಮಿತ್ರ ಪಕ್ಷ ಹಿಂದೂಸ್ತಾನಿ ಅವಾಮ್ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಅವರು ಭಗವಾನ್ ರಾಮನನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ. ಅವರು ತನ್ನನ್ನು ಮಾತಾ ಶಬರಿಯ ವಂಶಸ್ಥನೆಂದು ಬಣ್ಣಿಸಿದ್ದು, ಆದರೆ ಮರ್ಯಾದಾ ಪುರುಷೋತ್ತಮನನ್ನು ಕಾಲ್ಪನಿಕ ಪಾತ್ರವೆಂದು ಪರಿಗಣಿಸುವುದಾಗಿ ಹೇಳಿದ್ದಾರೆ.

“ನಾವು ತುಳಿದಾಸ್ ಜಿಯನ್ನು ನಂಬುತ್ತೇವೆ, ನಾವು ವಾಲ್ಮೀಕಿಯನ್ನು ನಂಬುತ್ತೇವೆ. ಆದರೆ ನಾವು ರಾಮನನ್ನು ನಂಬುವುದಿಲ್ಲ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!