ಕಾಗದದ ಕೊರತೆ: ಪರೀಕ್ಷೆಯನ್ನು ಮುಂದೂಡಿದ ಶ್ರೀಲಂಕಾ ಸರಕಾರ
ಕೊಲಂಬೊ: ಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದೆ.
ಕಾಗದವನ್ನು ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದಕ್ಕೂ ಆರ್ಥಿಕ ಕಷ್ಟ ಕಾಡಿದೆ. ಹಾಗಾಗಿ ಸೋಮವಾರದಿಂದ ನಡೆಯಬೇಕಿದ್ದ ಟರ್ಮ್ ಪರೀಕ್ಷೆಯನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ.
ದೇಶದಲ್ಲಿ ಒಟ್ಟಾರೆಯಾಗಿ 45 ಲಕ್ಷ ವಿದ್ಯಾರ್ಥಿಗಳಿದ್ದು, ಅದರಲ್ಲಿ ಮೂರನೇ ಎರಡು ಭಾಗ ವಿದ್ಯಾರ್ಥಿಗಳಿಗೆ ಈ ಕಾಗದ ಕೊರತೆಯ ಬಿಸಿ ಮುಟ್ಟಿದೆ.




