ಖಾವಿ ತೊಟ್ಟಿರುವ ನಾನು ಅಗತ್ಯಬಿದ್ದರೆ ತಲೆ ತೆಗೆಯಲೂ ಸಿದ್ಧ: ಋಷಿಕುಮಾರ ಸ್ವಾಮೀಜಿ
ಹಾಸನ: ‘ಖಾವಿ ತೊಟ್ಟಿರುವ ನಾನು ಅಗತ್ಯಬಿದ್ದರೆ ಕರೆ ನೀಡುವುದಷ್ಟೇ ಅಲ್ಲ, ತಲೆ ತೆಗೆಯಲೂ ಸಿದ್ಧ’ ಎಂದು ಅರಸೀಕೆರೆ ಕಾಳಿ ಮಠದ ಋಷಿಕುಮಾರ ಸ್ವಾಮೀಜಿ
ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
‘ಶಿವಮೊಗ್ಗದ ಹರ್ಷ ಕೊಲೆ ನಂತರ ಒಂದು ತಲೆಗೆ 10 ತಲೆ ತೆಗೆಯಬೇಕು ಎಂದು ಹೇಳಿಕೆ ನೀಡಿರುವುದರಲ್ಲಿ ಏನು ತಪ್ಪಿದೆ? ಹರ್ಷ ನಮ್ಮ ಮನೆಯ ಮಗ. ಆತನ ಸಾವು ಇನ್ನೂ ಕಾಡುತ್ತಿದೆ. ನಾನು ನೀಡಿದ ಹೇಳಿಕೆ ಹೇಗೆ ಪ್ರಚೋದನ ಕಾರಿಯಾಗುತ್ತದೆ?’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಸಮರ್ಥಿಸಿಕೊಂಡರು.




