ಆಳಂದ ಕೋಮುಗಲಭೆ ಪ್ರಕರಣ: ವೀಡಿಯೋ ಚಿತ್ರೀಕರಣ ಆಧರಿಸಿ 3 ಸಾವಿರ ಜನರ ವಿರುದ್ಧ ಎಫ್ಐಆರ್ ದಾಖಲು
ಆಳಂದ: ಮುಸ್ಲಿಮರ ದರ್ಗಾ ಆವರಣದಲ್ಲಿ ಗುರು ರಾಘವಚೈತನ್ಯ ಅವರ ಸಮಾಧಿ ಮೇಲೆ ಲಿಂಗ ಪ್ರತಿಷ್ಠಾಪನೆ ಮಾಡಿರುವ ವಿವಾದಕ್ಕೆ ಸಂಬಂಧಿಸಿ ಮಾ.1ರಂದು ಪಟ್ಟ ಣದಲ್ಲಿ ನಡೆದ ಗಲಭೆ ಪ್ರಕರಣದ ವಿಡಿಯೋ ಚಿತ್ರೀಕಣ ಆಧರಿಸಿ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಈಗಾಗಲೇ ಅಲ್ಪಸಂಖ್ಯಾತರ ಮೇಲೆ ದಾಖಲಾದ ಐದು ಪ್ರಕರಣಗಳ ಪೈಕಿ ಎಫ್ಐಆರ್ವೊಂದರಲ್ಲಿ 2500ರಿಂದ 3000 ಜನರಿದ್ದು, ಈ ಪೈಕಿ ಬುಧವಾರ 167 ಜನರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.




