March 22, 2026

ಮೂಲ್ಕಿ: ದೇವಳಕ್ಕೆ ಪೂಜೆ ಮಾಡಿಸಲು ತೆರಳುತ್ತಿದ್ದ ಹೊಸ ವಾಹನ ಪಲ್ಟಿ: ಪ್ರಯಾಣಿಕರು ಪಾರು

0
IMG_20220128_212532.jpg

ಕಟೀಲು: ಕಿನ್ನಿಗೋಳಿ-ಕಟೀಲು ರಾಜ್ಯ ಹೆದ್ದಾರಿಯ ಮೂರುಕಾವೇರಿ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಾರ್ಗಸೂಚಿ ಫಲಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು ಕಾರಿನಲ್ಲಿದ್ದವರು ಪವಾಡಸದೃಶ ಪಾರಾಗಿದ್ದಾರೆ.

ಮೂರು ಕಾವೇರಿಯಿಂದ ಕಟೀಲು ಕಡೆಗೆ ನೂತನ ಮಾರುತಿ ಎರ್ಟಿಗಾ ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದೆ.

ಅಪಘಾತದ ರಭಸಕ್ಕೆ ಮಾರ್ಗಸೂಚಿ ಫಲಕಕ್ಕೆ ಹಾನಿಯಾಗಿದ್ದು ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದವರು ಪವಾಡಸದೃಶ ಪಾರಾಗಿದ್ದಾರೆ.

ಕಾರಿನಲ್ಲಿದ್ದವರು ಮಂಗಳೂರು ಮೂಲದವರು ಎಂದು ತಿಳಿದುಬಂದಿದ್ದು ನೂತನ ಕಾರಿಗೆ ಪೂಜೆ ಸಲ್ಲಿಸಲು ಕಟೀಲು ದೇವಸ್ಥಾನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

Leave a Reply

Your email address will not be published. Required fields are marked *

error: Content is protected !!