ವಿಟ್ಲ,: ಕೊರಗಜ್ಜನ ವೇಷ ಧರಿಸಿ ಧಾರ್ಮಿಕ ಭಾವನೆಗೆ ಧಕ್ಕೆ:
ಸೂಕ್ತ ಕ್ರಮಕ್ಕೆ ತಾಜುದ್ದೀನ್ ಟರ್ಲಿ ಅಗ್ರಹ
ವಿಟ್ಲ: ಮದುವೆ ಸಮಾರಂಭದಲ್ಲಿ ವರನನ್ನು ಕೊರಗಜ್ಜನ ವೇಷ ಧರಿಸಿ ಕರೆದೊಯ್ದ ವರನ ಕಡೆಯ ಎಲ್ಲ ಯುವಕರ ಮೇಲೆ ಕೇಸು ದಾಖಲಿಸಿ ಜೈಲಿಗಟ್ಟಬೇಕೆಂದು ತಾಜುದ್ದೀನ್ ಟರ್ಲಿ ಒತ್ತಾಯಿಸಿದ್ದಾರೆ.
ಈ ಪ್ರಕರಣದಿಂದಾಗಿ ಇಡೀ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ, ಸ್ಥಳೀಯ ಮಸೀದಿ ಆಡಳಿತವು ಇದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸಬೇಕು ಹಾಗೂ ಮುಂದಿನ ತಲೆಮಾರಿಗೆ ಇದೊಂದು ಪಾಠವಾಗಬೇಕೆಂದು ಅವರು ಹೇಳಿದರು.
ಧಾರ್ಮಿಕ ನಂಬಿಕೆಗಳಿಗೆ ದಕ್ಕೆ ಬರುವಂತೆ ಮಾಡಿ ಸಮಾಜದಲ್ಲಿ ಅಶಾಂತಿ ನಿರ್ಮಾಣವಾಗಳು ಕಾರಣರಾಗುವ ಪ್ರತಿಯೊಬ್ಬರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.




