ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಧನಕೀರ್ತಿ ಆರಿಗಾ ಆಯ್ಕೆ
ಬೆಳ್ತಂಗಡಿ: ತಾಲೂಕು ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಸಂಜೆವಾಣಿ ಪತ್ರಿಕೆಯ ಪತ್ರಕರ್ತ ಧನಕೀರ್ತಿ ಆರಿಗ ಧರ್ಮಸ್ಥಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಶನಿವಾರ ಬೆಳ್ತಂಗಡಿ ಪ್ರೆಸ್ ಕ್ಲಬ್ ನಲ್ಲಿ ನಡೆದ ಸಂಘದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಕಾರ್ಯದರ್ಶಿಯಾಗಿ ಉದಯವಾಣಿ ದಿನಪತ್ರಿಕೆಯ ಚೈತ್ರೇಶ್ ಇಳಂತಿಲ, ಕೋಶಾಧಿಕಾರಿಯಾಗಿ ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಪುಷ್ಪರಾಜ್ ಶೆಟ್ಟಿ, ಉಪಾಧ್ಯಕ್ಷರಾಗಿ ಪ್ರಜಾವಾಣಿ ಪತ್ರಿಕೆಯ ಗಣೇಶ್ ಶಿರ್ಲಾಲು, ಜತೆ ಕಾರ್ಯದರ್ಶಿಯಾಗಿ ಜಯ ಕಿರಣ ಪತ್ರಿಕೆಯ ಅಶ್ರಪ್ ಆಲಿಕುಂಞ ಮುಂಡಾಜೆ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಶಿಭಿ ಧರ್ಮಸ್ಥಳ, ದೇವಿಪ್ರಸಾದ್, ಮಂಜುನಾಥ ರೈ, ಬಿ.ಎಸ್ ಕುಲಾಲ್, ಮನೋಹರ ಬಳೆಂಜ, ಅಚುಶ್ರೀ ಬಾಂಗೇರು, ಆರ್.ಎನ್ ಪೂವಣಿ, ಶ್ರೀನಿವಾಸ ತಂತ್ರಿ, ಭುವನೇಶ್ ಗೇರುಕಟ್ಟೆ, ಪ್ರಸಾದ್ ಶೆಟ್ಟಿ ಏಣಿಂಜೆ , ಪದ್ಮನಾಭ ವೇಣೂರು, ದೀಪಕ್ ಅಠಾವಳೆ, ಅರವಿಂದ ಹೆಬ್ಬಾರ್, ಸಂಜೀವ ಎನ್.ಸಿ, ಹೃಷಿಕೇಶ್ ಧರ್ಮಸ್ಥಳ, ಬಿ. ಜಾರಪ್ಪ ಪೂಜಾರಿ ಆಯ್ಕೆಯಾದರು.




