ವಿಟ್ಲ: ಸಮಾನ ಮನಸ್ಕರು ಸಂಘಟನೆ ವತಿಯಿಂದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಧ್ವಜಾರೋಹಣ
ವಿಟ್ಲ: ಸಮಾನ ಮನಸ್ಕರು ಸಂಘಟನೆ ವಿಟ್ಲ ಇದರ ವತಿಯಿಂದ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ಸ್ವಾತಂತ್ರೋತ್ಸವವನ್ನು ಆಚರಿಸಲಾಯಿತು.
ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಅರುಣ್ ವಿಟ್ಲ ಧ್ವಜಾರೋಹಣ ಮಾಡಿದರು.
ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಸದಸ್ಯೆ ಪದ್ಮಿನಿ ಸೇರಾಜೆ,ಉದ್ಯಮಿಗಳಾದ ಆಶ್ರಫ್ ಸೈಬರ್, ಇಸಾಕ್ ವಿಟ್ಲ, ಅಬೂಬಕರ್ ಜೋಗಿಮಠ, ಗೌಸ್ ಎಂಜಿಆರ್, ವಿಟ್ಲ ಪೊಲೀಸ್ ಠಾಣೆಯ ಸಿಬಂಧಿ ಹರೀಶ್ , ಸಮಾನ ಮನಸ್ಕ ಸಂಘಟನೆಯ ಮುಖ್ಯಸ್ಥರಾದ ಇಸ್ಮಾಯಿಲ್ ಒಕ್ಕೆತ್ತೂರು, ಆಸಿಫ್ ವಿಟ್ಲ ಮುಂತಾದವರಿದ್ದರು.
ಸದಸ್ಯ ಅಬೂಬಕರ್ ಅನಿಲಕಟ್ಟೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.




