September 8, 2024

ಚೆನ್ನೈ: ಹಲವೆಡೆ ಭಾರೀ ಮಳೆ:
ಶಾಲಾ- ಕಾಲೇಜು, ಸರ್ಕಾರಿ ಕಛೇರಿಗಳಿಗೆ ರಜೆ

0

ಚೆನ್ನೈ: ತಮಿಳುನಾಡಿನ ಹಲವೆಡೆ ಶುಕ್ರವಾರ ಭಾರಿ ಮಳೆಯಾಗಿದೆ. ಚೆನ್ನೈ, ಕಾಂಚೀಪುರಂ, ತಿರುವಳ್ಳೂರುಗಳಲ್ಲಿ ಭಾರಿ ಮಳೆಯ ಕಾರಣ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಶಾಲೆ, ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಿಗೆ ಶುಕ್ರವಾರ ರಜೆ ಘೋಷಿಸಿದ್ದಾರೆ.

ಚೆನ್ನೈಯಲ್ಲಿ ವಿದ್ಯುತ್ ಅಪಘಾತದಿಂದ ಮೂವರು ಮೃತಪಟ್ಟಿದ್ದಾರೆ. ಜಲಾವೃತಗೊಂಡಿರುವ ಕಾರಣ ನಾಲ್ಕು ಸುರಂಗ ಮಾರ್ಗಗಳನ್ನು ಮುಚ್ಚಲಾಗಿದೆ.

ಸ್ಟಾಲಿನ್ ಅವರು ಚೆನ್ನೈ ನಗರಪಾಲಿಕೆ ಆಯುಕ್ತ ಗಗನ್ ಸಿಂಗ್ ಬೇಡಿ ಹಾಗೂ ಇತರ ಅಧಿಕಾರಿಗಳ ಜತೆಗೆ ಚೆನ್ನೈಯ ಜಲಾವೃತ ಪ್ರದೇಶಗಳಿಗೆ ಭೇಟಿ ನೀಡಿ ಪರಾಮರ್ಶೆ ನಡೆಸಿದ್ದಾರೆ.

ಸುರಂಗ ಮಾರ್ಗಗಳನ್ನು ಮುಚ್ಚಿರುವ ಕಾರಣ ಚೆನ್ನೈಯ ಹಲವೆಡೆ ಸಂಚಾರಕ್ಕೂ ಅಡಚಣೆಯಾಗಿದೆ.

Leave a Reply

Your email address will not be published. Required fields are marked *

error: Content is protected !!