ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನ ಕೊಲೆ: ಯುವತಿಯ ತಂದೆ ಸಹಿತ ಆರೋಪಿಗಳ ಬಂಧನ
ಬೆಂಗಳೂರು: ಪುತ್ರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಯುವಕನನ್ನು ಕುತ್ತಿಗೆ ಬಿಗಿದು ಹತ್ಯೆಗೈದಿದ್ದ ಆಕೆಯ ತಂದೆ ಹಾಗೂ ಸಂಬಂಧಿಕರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಈರಯ್ಯ ದುಂಡಯ್ಯ ಮಠಪತಿ (45), ಸಂಬಂಧಿಕರಾದ ಚಿನ್ನಯ್ಯ (29), ಚೇತನ್ ಮಾದರ (26) ಮತ್ತು ವಿನಾಯಕ ಗುರುವ (19) ಬಂಧಿತರು. ಆರೋಪಿಗಳು ಏ.27ರಂದು ರಮೇಶ್ ಪಟ್ಟದಕಲ್ಲು (28) ಎಂಬಾತನನ್ನು ಹತ್ಯೆಗೈದಿದ್ದರು.





