ನೀರುಮಾರ್ಗ: ಅರಣ್ಯ ಇಲಾಖೆಯ ಬೋನ್ ಗೆ ಬಿದ್ದ ಚಿರತೆ
ಮಂಗಳೂರು: ಕೆಲವು ದಿನಗಳಿಂದ ನೀರುಮಾರ್ಗ ಕೆಲರೈ ಪರಿಸರದಲ್ಲಿ ಕಂಡು ಬಂದ ಚಿರತೆಯನ್ನು ಅರಣ್ಯ ಇಲಾಖೆ ಬೋನ್ ಇಟ್ಟು ಸೆರೆ ಹಿಡಿದಿದೆ.
ಕೆಲ ದಿನಗಳ ಹಿಂದಷ್ಟೇ ಮಂಗಳೂರಿನ ಶಕ್ತಿನಗರದಲ್ಲಿ ಚಿರತೆಯ ಓಡಾಟ ಕುರಿತಂತೆ ಭಾರೀ ಸುದ್ದಿಯಾಗಿತ್ತು. ಇದೀಗ ನಿನ್ನೆ ರಾತ್ರಿ ನೀರುಮಾರ್ಗ ಸಮೀಪ ಪೊದೆಯೊಂದರಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಈ ವೇಳೆ ಭಯಭೀತರಾದ ಸ್ಥಳೀಯರು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಈ ಹಿನ್ನಲೆ ಅರಣ್ಯ ಇಲಾಖೆ ಚಿರತೆ ಸೆರೆಗಾಗಿ ಬೋನ್ ಇಟ್ಟಿತ್ತು, ಇದೀಗ ಇಂದು ಬೆಳಿಗ್ಗೆ 3:30 ಗೆ ಚಿರತೆ ಬೋನಿಗೆ ಬಿದ್ದಿದೆ.




