March 12, 2026

ಡೆಲಿವರಿ ಸ್ಥಳ ವಿಚಾರವಾಗಿ ವ್ಯಕ್ತಿಗೆ ಹಲ್ಲೆ ನಡೆಸಿದ ಬ್ಲಿಂಕಿಟ್‌ ಸಿಬ್ಬಂದಿ

0
image_editor_output_image1118909691-1773273214438.jpg

ಬೆಂಗಳೂರು: ಮಾರ್ಚ್ 7 ರಂದು ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಗಾಳಮ್ಮ ಲೇಔಟ್‌ನಲ್ಲಿ ಡೆಲಿವರಿ ಸ್ಥಳ ವಿವಾದಕ್ಕೆ ಸಂಬಂಧಿಸಿದಂತೆ 27 ವರ್ಷದ ಖಾಸಗಿ ಕಂಪನಿ ಉದ್ಯೋಗಿಯ ಮೇಲೆ ಬ್ಲಿಂಕಿಟ್‌ ಕೆಲಸಗಾರ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಈ ಹಲ್ಲೆಯ ಪರಿಣಾಮವಾಗಿ ಮೂಗಿನ ಮೂಳೆ ಮುರಿದಿದೆ.

ಸಂತ್ರಸ್ತ ಪಾಲ್ ಜೆ ವಿಥಯತಿ ಕೋರಮಂಗಲದ 8 ನೇ ಬ್ಲಾಕ್ ನಿವಾಸಿಯಾಗಿದ್ದು, ಕೇರಳ ಮೂಲದವರಾಗಿದ್ದಾರೆ. ಮಾರ್ಚ್ 7 ರಂದು ಬ್ಲಿಂಕಿಟ್‌ನಿಂದ ತಿಂಡಿ ಆರ್ಡರ್ ಮಾಡಿದ್ದಾರೆ. ವಿತರಣಾ ಏಜೆಂಟ್ ಅವರಿಗೆ ಕರೆ ಮಾಡಿ ಮನೆಗೆ ಬರುತ್ತಿರುವುದಾಗಿ ಹೇಳಿದ್ದಾರೆ. ಎರಡನೇ ಮಹಡಿಯ ಫ್ಲಾಟ್‌ಗೆ ಹೋಗುವ ಬದಲು, ವಿತರಣಾ ಏಜೆಂಟ್ ನಾಲ್ಕನೇ ಮಹಡಿಗೆ ಹೋಗಿದ್ದಾರೆ.

ಗ್ರಾಹಕರು ಕರೆ ಮಾಡಿ, ಸರಿಯಾದ ಮಹಡಿಗೆ ಬರಲು ಕೇಳಿದಾಗ, ವಿತರಣಾ ಏಜೆಂಟ್ ಫ್ಲಾಟ್ ಬಳಿ ಬಂದು ಜಗಳವಾಡಿದ್ದಾನೆ. ತಮಿಳಿನಲ್ಲಿ ಬೈದಿದ್ದಾನೆ, ಮಾತು ವಿಕೋಪಕ್ಕೆ ತಿರುಗಿ ಗುದ್ದಾಡಿದ್ದಾರೆ ಎನ್ನಲಾಗಿದೆ. ವಿಥಯತಿ ಅವರ ಮೂಗು ಮತ್ತು ತುಟಿಗಳ ಬಳಿ ತೀವ್ರ ಗಾಯಗಳಾಗಿದ್ದು, ರಕ್ತಸ್ರಾವವಾಗಿದೆ. ಹಲ್ಲೆಯಲ್ಲಿ ಮೂಗಿನ ಮೂಳೆ ಮುರಿದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ನಂತರ ಸಂತ್ರಸ್ತನ ಸಂಬಂಧಿ ಬ್ಲಿಂಕಿಟ್ ಅನ್ನು ಟ್ಯಾಗ್ ಮಾಡಿ X ನಲ್ಲಿ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ, ಕಂಪನಿಯು, “ಇದರ ಬಗ್ಗೆ ಕೇಳಿ ನಮಗೆ ತುಂಬಾ ಕಳವಳವಾಗಿದೆ ಮತ್ತು ಅಂತಹ ಕ್ರಮಗಳ ಬಗ್ಗೆ ನಾವು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದ್ದೇವೆ ಎಂದು ನಿಮಗೆ ಭರವಸೆ ನೀಡಲು ಬಯಸುತ್ತೇವೆ. ನಾವು ಇದನ್ನು ಆದ್ಯತೆಯ ಮೇಲೆ ತನಿಖೆ ಮಾಡುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಅಪ್ಡೇಟ್ ಅನ್ನು ಹಂಚಿಕೊಳ್ಳುತ್ತೇವೆ” ಎಂದು ಹೇಳಿದೆ.

ಆರಂಭದಲ್ಲಿ, NCR ದಾಖಲಿಸಲಾಗಿತ್ತು. ಮಂಗಳವಾರ, ಸೆಕ್ಷನ್ 117, 126 ಮತ್ತು BNS ನ ಇತರ ವಿಭಾಗಗಳ ಅಡಿಯಲ್ಲಿ FIR ದಾಖಲಿಸಲಾಗಿದೆ. ಜೋಸೆಫ್ ಎಂದು ಗುರುತಿಸಲಾದ ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!