ಉಪ್ಪಿನಂಗಡಿ: ಬೈಕ್, ಕಾರುಗಳ ನಡುವೆ ಅಪಘಾತ: ಬೈಕ್ ಸವಾರ, ಕುರಾಯ ನಿವಾಸಿ ಸಾವು
ಉಪ್ಪಿನಂಗಡಿ: ಬೈಕ್ ಮತ್ತು ಕಾರುಗಳ ನಡುವೆ 34ನೇ ನೆಕ್ಕಿಲಾಡಿ ಬೊಳ್ಳಾರ್ ಎಂಬಲ್ಲಿ ರವಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಪದ್ಮುಂಜ ಸಹಕಾರಿ ಸಂಘದ ಹಿರಿಯ ಗುಮಾಸ್ತ ಬಂದಾರು ಗ್ರಾಮದ ಕರಾಯ ನಿವಾಸಿ ಚಿದಾನಂದ ಗೌಡ (56) ಸಾವನ್ನಪ್ಪಿದ ಘಟನೆ ಸಂಭವಿಸಿದೆ.
ಘಟನೆ ಸಂಭವಿಸಿದಾಗ ಗಂಭೀರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಅವರು ಚಿಕಿತ್ಸೆ ಫಲಕಾರಿ ಆಗದೆ ಸಾವನ್ನಪ್ಪಿದರು.




