ಮಂಗಳೂರು: ಸ್ವಾತಿ ಸತೀಶ್ ಮುಡಿಪು ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು: ಬಹುಮುಖ ಪ್ರತಿಭೆ ಸ್ವಾತಿ ಆರ್ಟ್ಸ್’ ಬ್ಯಾನರ್ ಅಡಿಯಲ್ಲಿ ಕಳೆದ ಮೂರೂವರೆ ದಶಕಗಳಿಂದ ಸೃಜನಶೀಲ ಮತ್ತು ಲಲಿತಕಲೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಸ್ವಾತಿ ಸತೀಶ್ ಎಂದೇ ಚಿರಪರಿಚಿತರಾಗಿರುವ ಮುಡಿಪು ನಿವಾಸಿ ಸತೀಶ್ (49) ಅವರು ಶನಿವಾರ ನಿಧನರಾಗಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಮನನೊಂದಿದ್ದ ಅವರು ಮುಡಿಪುವಿನ ಮಿತ್ತಬಾರೆ ಬಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.




